Mangalore: ಡಾ. ಶ್ಯಾಮ ಪ್ರಸಾದ್ ಮುಖರ್ಜಿಯ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ

Mangalore: ಡಾ. ಶ್ಯಾಮ ಪ್ರಸಾದ್ ಮುಖರ್ಜಿಯ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ


ಮಂಗಳೂರು: ಡಾ. ಶ್ಯಾಮ ಪ್ರಸಾದ್ ಮುಖರ್ಜಿಯ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ಜೂ.30 ರಂದು ಬಿಜೆಪಿ ಮಂಗಳೂರು ದಕ್ಷಿಣ ಮಂಡಳ ಇದರ ಅಲ್ಪ ಸಂಖ್ಯಾತ ಮೊರ್ಚಾದ ವತಿಯಿಂದ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಸಂತ ಜೋಸೆಫ್ ಸೆಮಿನರಿ ಇದರ ಆವರಣದಲ್ಲಿರುವ ಸಿ.ಎಂ. ಹಾಲ್‌ನಲ್ಲಿ ನಡೆಯಿತು.

ಶಾಸಕ ಡಿ. ವೇದವ್ಯಾಸ್ ಕಾಮತ್, ಬಿಜೆಪಿ ಮಂಗಳೂರು ದಕ್ಷಿಣ ಮಂಡಳ ಅಧ್ಯಕ್ಷ ರಮೇಶ ಕಂಡೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ, ಮಂಡಳದ ಪ್ರಧಾನ ಕಾರ‍್ಯದರ್ಶಿಗಳಾದ ಮಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ನಿಡ್ಡೆಲ್, ಫಳ್ನೀರ್ ವಾರ್ಡ್ ಪ್ರಮುಖ, ರಾಜ್ಯ ಅಲ್ಪ ಸಂಖ್ಯಾ ಮೋರ್ಚಾದ ಪ್ರಧಾನ ಕಾರ‍್ಯದರ್ಶಿಯಾದ ಜೆಸಲ್ ಡಿಸೋಜಾ, ಗಣೇಶ್ ಎಮ್.ಬಿ., ಕೆಎಂಸಿ ಆಸ್ಪತ್ರೆ ವೈದ್ಯೆ ಡಾ. ಊರ್ವಶಿ ಗುನೆವಾಲ್, ಸಂತ ಜೋಸೆಫ್ ಸೆಮಿನರಿ ಜೆಪ್ಪು ಇದರ ರೆಕ್ಟರ್ ವಂದನೀಯ ರೋನಾಲ್ಡ್ ಸೆರಾವೊ, ಅಲ್ಪ ಸಂಖ್ಯಾತ ಮೊರ್ಚಾದ ಮಂಗಳೂರು ದಕ್ಷಿಣ ಮಂಡಳದ ಪ್ರಧಾನ ಕಾರ‍್ಯದರ್ಶಿ ಉದಯ್ ಡಿಸೋಜಾ, ಅಧ್ಯಕ್ಷ ದೀಪಕ್ ಡಿಸೋಜಾ ಅತ್ತಾವರ ಉಪಸ್ಥಿತರಿದ್ದರು.

ಡಾ| ಶ್ಯಾಮ್ ಪ್ರಸಾದ್  ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಅಲ್ಪ ಸಂಖ್ಯಾತ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಮೊರ್ಚಾದ ಅಧ್ಯಕ್ಷ ದೀಪಕ್ ಡಿಸೋಜಾ ಅತ್ತಾವರ ಪ್ರಾಸ್ತಾವಿಕ ಭಾಷಣಗೈದರು. 

ಸೆಮಿನರಿ ರೆಕ್ಟರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಆದರ್ಶದಡಿ ಈ ಕಾರ್ಯಕ್ರಮವನ್ನು ನಡೆಸಿಕೊಂಡದಕ್ಕೆ ಮೆಚ್ಚುಗೆ ಸಲ್ಲಿಸಿದರು. ಡಾ. ಊರ್ವಶಿ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೆ.ಎಂ.ಸಿ ವತಿಯಿಂದ ಅಲ್ಪಸಂಖ್ಯಾ ಮೋರ್ಚಾವನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಖಜಾಂಚಿ ಸುಪ್ರಿಯಾ ಕ್ರಿಸ್ತಬೆಲ್ ವಂದಿಸಿದರು. ಟೀನಾ ಪಿರೇರಾ ಕಾರ್ಯಕ್ರಮವನ್ನು ನಿರ್ವಹಿಸಿದರು. 

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಕೀರ್ ಕಣ್ಣೂರು, ಅಬ್ದುಲ್ ರಶೀದ್ ಬೋಳಾರ್, ಟೀನಾ ಪಿರೇರಾ, ನೆಲ್ಸನ್ ಕ್ಯಾಸ್ಟಲಿನೊ, ಉದಯ್ ಡಿಸೋಜಾ, ಸುಪ್ರಿಯಾ ಕ್ರಿಸ್ತಬೆಲ್, ಮತ್ತು ಸುಶೀಲ್ ಪಾಲಣ್ಣ ಅವರನ್ನು ಸನ್ಮಾನಿಸಲಾಯಿತು. 30 ಜನರು ರಕ್ತದಾನ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article