Mangalore: ಮನೆಯ ಹಿಂಬಾಗಿಲು ಒಡೆದು ದರೋಡೆ
Sunday, July 14, 2024
ಮಂಗಳೂರು: ನಗರದ ಬಿಜೈ ನ್ಯೂರೋಡ್ ಬಳಿಯ ಮನೆಯೊಂದರ ಹಿಂಬಾಗಿಲು ಒಡೆದು ದರೋಡೆ ಮಾಡಲಾಗಿದೆ. ಮನೆಯನ್ನು ಜಾಲಾಡಿರುವ ಕಳ್ಳರು ಕಪಾಟನ್ನು ಒಡೆದು ಅದರಲ್ಲಿದ್ದ 5 ಸಾವಿರ ರೂ. ನಗದು, ಒಂದು ಸ್ಟಿಕ್ಕರ್ ಸಿಕ್ಕಿದ್ದನ್ನು ಕದ್ದು ಪರಾರಿಯಾಗಿದ್ದಾರೆ.
ಈ ಮನೆಯಲ್ಲಿ ಶೀನ ದೇವಾಡಿಗ ಮತ್ತು ಕಸ್ತೂರಿ ಈ ಇಬ್ಬರು ವೃದ್ಧ ದಂಪತಿ ವಾಸ್ತವ್ಯ ಇದ್ದಾರೆ. ಶೀನ ದೇವಾಡಿಗರು ಡೆಂಘೀ ಜ್ವರ ಹಿನ್ನೆಲೆಯಲ್ಲಿ ಜೂ.28 ರಂದು ಪತ್ನಿ ಸಮೇತ ಅಶೋಕನಗರದಲ್ಲಿರುವ ಪುತ್ರನ ಮನೆಗೆ ಹೋಗಿದ್ದರು. ಮನೆಯನ್ನು ಸ್ವಚ್ಛಗೊಳಿಸಲು ಭಾನುವಾರ ಪತ್ರ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.
ಉರ್ವ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಜೂ.30 ರಂದು ಮನೆಯವರು ಒಡವೆಯನ್ನು ಕೊಂಡೊಯ್ದಿದ್ದರು. ಹಾಗಾಗಿ ಹೆಚ್ಚಿನ ಸೊತ್ತು ಕಳವು ಸಾಧ್ಯವಾಗಿಲ್ಲ. ಕಪಾಟಿನಲ್ಲಿ 9 ಸಾವಿರ ರೂ. ನಗದು ಇದ್ದರೂ ಅದು ಕಳ್ಳರ ಕೈಗೆ ಸಿಕ್ಕಿಲ್ಲ.