ಜೈ ಶಿವಾಜಿ ಸೇವಾ ಟ್ರಸ್ಟ್(ರಿ.)ಹಟ್ಟಿಯಂಗಡಿ- ಹಟ್ಟಿಕುದ್ರು ವತಿಯಿಂದ ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ 30,000 ರೂ. ಮೌಲ್ಯದ ದಿನಬಳಕೆಯ ವಸ್ತುಗಳ ಹಸ್ತಾಂತರ
Monday, September 23, 2024
ಕುಂದಾಪುರ: ಜೈ ಶಿವಾಜಿ ಸೇವಾ ಟ್ರಸ್ಟ್(ರಿ.) ಹಟ್ಟಿಯಂಗಡಿ- ಹಟ್ಟಿಕುದ್ರು-ಉಡುಪಿ ಜಿಲ್ಲೆ. ಇವರ ವತಿಯಿಂದ ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಸೆ.22 ರಂದು ದಾನಿಗಳಿಂದ ಸಂಗ್ರಹಿಸಲಾದ ಸುಮಾರು 30,000 ರೂ. ಮೌಲ್ಯದ ದಿನ ಬಳಕೆಯ ಸಾಮಾಗ್ರಿಗಳನ್ನು ಆಶ್ರಮಕ್ಕೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಟ್ರಸ್ಟಿನ ಸದಸ್ಯರಾದ ರತ್ನಾಕರ ಪೂಜಾರಿ ಹಟ್ಟಿಕುದ್ರು., ಶ್ರೀನಿಧಿ ಭಟ್, ರಾಧಕೃಷ್ಣ ಭಟ್ ಹಟ್ಟಿಯಂಗಡಿ, ಜಯಕರ್ ಹಟ್ಟಿಕುದ್ರು, ಪ್ರವೀಣ್ ಹಟ್ಟಿಕುದ್ರು, ಜಯರಾಜ್ ಪಡುಕರೆ, ಮಂಜುನಾಥ ಸ್ಯಾಬರಕಟ್ಟೆ, ಮಹೇಶ್ ಸ್ಯಾಬರಕಟ್ಟೆ ಉಪಸ್ದಿತರಿದ್ದರು.
