ಮಂಗಳೂರು: ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದದ ವಾದಿರಾಜ ಮಂಟಪದ, ವಿಶ್ವೇಶ ತೀರ್ಥ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಸ್ವರೂಪದಲ್ಲೊಂದಾದ ರಂಗವಲ್ಲಿಯಲ್ಲಿ ‘ರತನ್ ಟಾಟಾ’ ಅವರ ಭಾವಚಿತ್ರವನ್ನು ಕಲಾವಿದೆ ಬಿಂದು ರಚಿಸಿದ್ದು, ಹಿನ್ನೆಲೆಯಲ್ಲಿ ದಸರಾ ಗೊಂಬೆಗಳು ಹಾಗೂ ಪಾರಂಪರಿಕ ವಸ್ತು ಪ್ರದರ್ಶನವನ್ನು ಕಾಣಬಹುದಾಗಿದೆ.