
ಡಾ. ಪುಂಡಿಕಾಯ್ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ 'ನಾಯಕಶ್ರೀ' ಪ್ರಶಸ್ತಿ
Friday, October 25, 2024
ಮೂಡುಬಿದಿರೆ: ಕರ್ನಾಟಕ ಇತಿಹಾಸ ಅಕಾಡೆಮಿಯು ವಿಶೇಷವಾಗಿ ನಾಡಿನ ಸ್ಥಳಿಕ ಅರಸು ಮನೆತನಗಳ ಅಧ್ಯಯನದ ಹಿನ್ನೆಲೆಯಲ್ಲಿ ನೀಡುವ ಈ ಸಾಲಿನ 'ನಾಯಕಶ್ರೀ' ಪ್ರಶಸ್ತಿಗೆ ಹಿರಿಯ ಇತಿಹಾಸ ತಜ್ಞ ಮೂಡುಬಿದಿರೆಯ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಆಯ್ಕೆಯಾಗಿದ್ದಾರೆ.
15,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಈ ಪ್ರಶಸ್ತಿಯನ್ನು ಇದೇ ನವಂಬರ್ ತಿಂಗಳಲ್ಲಿ ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತದೆ.