
ನೆಲಕ್ಕುರುಳಿದ ಮರ: ಅಪಾರ ಹಾನಿ
Wednesday, January 1, 2025
ಮಂಗಳೂರು: ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಘಟನೆ ಬಲ್ಮಠ ಸಹೋದಯ ಸಭಾಂಗಣದ ಮುಂಭಾಗದ ಕ್ರೀಡಾಂಗಣದ ಬಳಿ ಇಂದು ನಡೆದಿದೆ.
ಮರವು ವಿದ್ಯುತ್ ತಂತಿ, ಕಂಬಗಳ ಮೇಲೆಯೇ ಉರುಳಿ ಬಿದ್ದ ಪರಿಣಾಮ ಅಪಾರ ಹಾನಿಗಳಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದೆ. ವಾಹನಗಳು ಜಖಂ ಆಗಿದ್ದು, ಒಂದು ಕುಟುಂಬ ಅಪಾಯದಿಂದ ಪಾರಾಗಿದೆ.