
ಪತ್ರಿಕೋದ್ಯಮ ಮತ್ತು ಸಾಹಿತ್ಯ: ಒಂದು ಹರಟೆ
ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಮಂಗಳೂರು ಸಾಹಿತ್ಯೋತ್ಸವದಲ್ಲಿ ‘ಪತ್ರಿಕೋದ್ಯಮ ಮತ್ತು ಸಾಹಿತ್ಯ - ಒಂದು ಹರಟೆ’ ಕಾರ್ಯಕ್ರಮ ಇಂದು ನಡೆಯಿತು.
ಬರರಗಾರ, ಕತೆಗಾರ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಹಾಗೂ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಹರಟೆ ನಡೆಸಿಕೊಟ್ಟರು.
ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಕಾಲಚಕ್ರದೊಂದಿಗೆ ಸಾಕಷ್ಟು ಬದಲಾವಣೆಗಳು ಕಾಣಸಿಗುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಓದುಗರು ವಲಸೆ ಬಂದಿದ್ದಾರೆ. ಇತ್ತೀಚಿನ ಕವಿಗಳು ತಮ್ಮ ಕವನಗಳನ್ನು ಪತ್ರಿಕೆಗೆ ಕಳಿಸುವ ಬದಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಕೃತಿಗಳ ಪ್ರಾತಿನಿಧ್ಯ ಪ್ರಿಂಟ್ಗಿಂತ ಡಿಜಿಟಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. ಸಹಜವಾದ ಕಾರ್ಯಕ್ರಮಗಳು ಮತ್ತುಯುವ ಪೀಳಿಗೆಯ ಪ್ರಬಲ ಹಾಜರಾತಿ ಸಾಹಿತ್ಯಕ್ಕೆ ಹೊಸ ಭರವಸೆಯನ್ನು ಒದಗಿಸುತ್ತಿದೆ. ಸಂಸ್ಕೃತಿ, ಪಠನಶೀಲತೆ, ಮತ್ತು ಆಧುನಿಕತೆ ಪರಸ್ಪರ ಬೆರೆಯುವ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮ ಹೊಸ ಹಾದಿಯಲ್ಲಿದೆ.
ನಮಗೆ ಡಿಜಿಟಲ್ ತಂತ್ರಜ್ಞಾನ ಆಧಾರಿತ ಮಾಧ್ಯಮದ ಬೆಳವಣಿಗೆ ಮುಖ್ಯ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದು. ಪತ್ರಿಕೋದ್ಯಮ, ಸಾಹಿತ್ಯ, ಮತ್ತು ಸಂಗೀತ ಕ್ಷೇತ್ರಗಳಲ್ಲಿ ಡಿಜಿಟಲ್ ಮಾಧ್ಯಮದ ಪ್ರವೇಶದಿಂದ ನಿರ್ವಹಣಾ ಕಾರ್ಯಗಳು ಸುಲಭವಾಗಿವೆ, ಆದರೆ ಓದುವ ಪ್ರಿಯರು ಇನ್ನೂ ಮುದ್ರಣ ಮಾಧ್ಯಮದ ಅನುಭವಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಬರವಣಿಗೆ ಡಿಜಿಟಲ್ ಮಾದರಿಯಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಓದುಗರ ಮನಸ್ಥಿತಿಯು ಮುದ್ರಿತ ಮಾಧ್ಯಮದಿಂದ ದೂರ ಸರಿದಿಲ್ಲ.
ತಂತ್ರಜ್ಞಾನದ ಸಹಾಯದಿಂದ ಗ್ರಾಹಕರು ಹೆಚ್ಚು ಅನುಕೂಲವನ್ನ ಪಡೆಯುತ್ತಿದ್ದರೂ ಬದಲಾವಣೆಗಳು ಮಾಧ್ಯಮದ ಭವಿಷ್ಯವನ್ನು ಹೇಗೆ ರೂಪಿಸುತ್ತವೆ ಎಂಬ ಪ್ರಶ್ನೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳ ಓದುಗರ ಸಂಖ್ಯೆಯಲಿ ಗಣನೀಯ ಕುಸಿತ ಕಂಡು ಬಂದಿದೆ. 2000ರಲ್ಲಿ 17-18 ಲಕ್ಷ ಪ್ರಸಾರ ಹೊಂದಿದ್ದ ಕನ್ನಡದ ಪತ್ರಿಕೆಗಳು, ಕೋವಿಡ್ ನಂತರ ಕುಸಿಯುತ್ತಿದೆ. ಕೇವಲ 50 ಪೈಸೆ ಹೆಚ್ಚಿಸಿದರೂ ಓದುಗರ ಸಂಖ್ಯೆತಕ್ಷಣವೇ ಇಳಿಯುತ್ತದೆ. ಟಿವಿ ಮಾಧ್ಯಮಗಳಲ್ಲಿ ಟಿಅರ್ಪಿ ಮೇಲೆ ನಿಂತಿದೆ. ಟಿಅರ್ಪಿಗಾಗಿ ಕಸರತ್ತು ನಡೆಸುತ್ತಿದೆ. ಪೇ ಚಾನೆಲ್ ಮಾಡಬೇಕಾದರೂ ಜನರು ಚಂದಾದಾರಿಕೆಗೆ ತಾತ್ಸಾರ ತೋರಿಸುತ್ತಾರೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳ ಗೇಟ್ಕೀಪಿಂಗ್ ಕೊರತೆಯು ಕೀಳಮಟ್ಟದ ವಿಷಯಗಳನ್ನು ಪ್ರಚಲಿತಗೊಳಿಸುತ್ತಿದೆ. ಉತ್ತಮ ಕಂಟೆಂಟ್ ಉಂಟ ಮಾಡಲು ಪ್ರಿಂಟ್, ಟೆಲಿವಿಷನ್, ಡಿಜಿಟಲ್ ಮಾಧ್ಯಮಗಳು ಸಮನ್ವಯ ಸಾಧಿಸಿ ಬದಲಾವಣೆ ತರಬೇಕಾಗಿದೆ.
ಎಐ ತಂತ್ರಜ್ಞಾನ ಮಾಧ್ಯಮಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ನ್ಯೂಸ್ ರೂಮ್ಗಳಲ್ಲಿ, ಮಾದರಿಯ ವರದಿ ಬರೆಯಲು ಆಂಗ್ಲ ಭಾಷೆ ಗೊತ್ತಿರುವ ವ್ಯಕ್ತಿಗಳನ್ನು ಮಾತ್ರ ಅಗತ್ಯವಿದೆ. ಮಾಧ್ಯಮದ ಶ್ರಮವನ್ನು ಕಡಿಮೆ ಮಾಡಲು, ಚಾಟ್ಜಿಪಿಟಿ ಹೋಲುವ ಎಐ ಸಾಧನಗಳು ಕಚ್ಚಾ ವರದಿಗಳನ್ನು ಶುದ್ಧ ಮಾಡುತ್ತಿವೆ. ಮಧ್ಯಮ ಮಟ್ಟದ ಪತ್ರಕರ್ತರ ಕಾರ್ಯಗಳು ಅಶಕ್ತವಾಗುತ್ತಿದ್ದು, 40% ಮ್ಯಾನ್ ಪವರ್ಕಡಿತಗೊಂಡಿದೆ. ಉನ್ನತ ಮಟ್ಟದ ನಿರ್ಧಾರಗಳಿಗಾಗಿ ಎಡಿಟರ್ಗಳು ಮಾತ್ರ ಅಗತ್ಯವಿದ್ದಾರೆ. ಕನ್ನಡ ಮಾಧ್ಯಮಕ್ಕೆ ಈ ಬದಲಾವಣೆ ತಕ್ಷಣ ಪರಿಣಾಮ ಬೀರುವುದಿಲ್ಲ. ಆದರೆ, ಭವಿಷ್ಯದಲ್ಲಿ ಈ ತಂತ್ರಜ್ಞಾನಕನ್ನಡದಲ್ಲಿ ಸಹ ನಿಖರವಾಗಿಕಾರ್ಯನಿರ್ವಹಿಸಲು ಸುಧಾರಣೆಗೊಳ್ಳಬಹುದು ಎಂಬ ಸಾಧ್ಯತೆ ಇದೆ. ಈ ವಿಷಯಗಳು ಹರಟೆಯಲ್ಲಿದ್ದವು.