
ಮುಖ್ಯಮಂತ್ರಿಗೆ ಮಂಗಳೂರು ಜನತೆಯಿಂದ ಭರ್ಜರಿ ಸ್ವಾಗತ
Saturday, January 11, 2025
ಮಂಗಳೂರು: ನರಿಂಗಾನ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ಸಂಜೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆಗೆರದು ಭರ್ಜರಿಯಾಗಿ ಸ್ವಾಗತಿಸಿದರು.
ಸಿದ್ದರಾಮಯ್ಯ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಅವರ ಕಾರಿನ ಮೇಲೆ ಅಭಿಮಾನಿಗಳು ಹೂಮಳೆಗೆರೆದು ಸ್ವಾಗತಿಸಿದರು. ಮುಖ್ಯಮಂತ್ರಿ ವಾಹನದಿಂದ ಇಳಿದು ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಅವರಿಗೆ ಹೂವಿನ ಹಾರಾರ್ಪಣೆಗೈದು ಅಭಿನಂದಿಸಿದರು.