
ಶ್ರೀ ಸೋಮನಾಥ ದೇವಸ್ಥಾನದ ಮೇಲ್ಛಾವಣಿ ಹಾಗೂ ಅನ್ನಪೂರ್ಣೇಶ್ವರಿ ಭೋಜನಾಲಯವನ್ನು ಉದ್ಘಾಟಿಸಿದ ಶಾಸಕ ಕಾಮತ್
Friday, February 28, 2025
ಮಂಗಳೂರು: ನಗರದ ಶ್ರೀ ಸೋಮನಾಥ ದೇವಸ್ಥಾನ, ನೀರೇಶ್ವಾಲ್ಯ, ಗೂಡ್'ಶೆಡ್ ರಸ್ತೆ ಇಲ್ಲಿ ಶಾಸಕರ ನಿಧಿಯಿಂದ ಅಭಿವೃದ್ಧಿಗೊಂಡ ಮೇಲ್ಛಾವಣಿ ಹಾಗೂ ಸರ್ವರ ಸಹಕಾರದಿಂದ ನಿರ್ಮಾಣಗೊಂಡ ಅನ್ನಪೂರ್ಣೇಶ್ವರಿ ಭೋಜನಾಲಯವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು.
ಬಳಿಕ ಅವರು ಮಾತನಾಡಿ, ದೇವರ ಉತ್ಸವದ ಸಂದರ್ಭದಲ್ಲಿ ನಡೆಯುವ ಅನ್ನಸಂತರ್ಪಣಾ ಸೇವೆಯು ಭಕ್ತರಿಗೆ ಸಾಂಗವಾಗಿ ನಡೆಯುವ ಉದ್ದೇಶದೊಂದಿಗೆ ಇಲ್ಲಿ ಸುಸಜ್ಜಿತವಾದ ಭೋಜನಾಲಯ ಹಾಗೂ ಭಕ್ತರ ಹಿತದೃಷ್ಟಿಯಿಂದ ಮೇಲ್ಛಾವಣಿಯನ್ನು ನಿರ್ಮಿಸಲಾಗಿದ್ದು ಪವಿತ್ರ ಶಿವರಾತ್ರಿಯ ಸಂದರ್ಭದಲ್ಲೇ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್. ಅಶೋಕ್ ನಾಯಕ್, ಸಹ ಮೊಕ್ತೇಸರರಾದ ಎನ್. ಶಿವಪ್ರಸಾದ್ ನಾಯಕ್, ಲಲಿತಾ ಮತ್ತು ಎಚ್. ಪ್ರಭಾಕರ ನಾಯಕ್ ಹೊನ್ನಕಟ್ಟೆ, ಸುಷ್ಮಾ ಮತ್ತು ಸುರೇಶ ಮಾಧವ ನಾಯಕ್ ಕೋಡಿಕಲ್, ಸುಪ್ರಿಯ ಮತ್ತು ಪ್ರವೀಣಚಂದ್ರ ಸುಂದರ ನಾಯಕ್ ಮಣ್ಣಗುಡ್ಡೆ, ಚಾರೋಡಿ ಅಭ್ಯುದಯ ಸಂಘದ ಅಧ್ಯಕ್ಷರಾದ ಬಿ. ಮಧುಕರ ನಾಯಕ್ ಅಲ್ಲದೇ ಅನೇಕರು ಉಪಸ್ಥಿತರಿದ್ದರು.