ಮಂಗಳೂರು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ‘ಸುಸ್ಥಿರತೆಯನ್ನು ಬೆಳೆಸುವ’ ಅಂತರರಾಷ್ಟ್ರೀಯ ಸಮ್ಮೇಳನ

ಮಂಗಳೂರು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ‘ಸುಸ್ಥಿರತೆಯನ್ನು ಬೆಳೆಸುವ’ ಅಂತರರಾಷ್ಟ್ರೀಯ ಸಮ್ಮೇಳನ

ಮಂಗಳೂರು: ಫೆ.25 ರಂದು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ (ಸ್ವಾಯತ್ತ) ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ   (ಐಕ್ಯೂಎಸಿ) ವಿಭಾಗಗಳು ಜಂಟಿಯಾಗಿ ‘ಸುಸ್ಥಿರತೆಯನ್ನು ಬೆಳೆಸುವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ‘ಸುಸ್ಥಿರತೆಯನ್ನು ಬೆಳೆಸುವ ಅಂತರರಾಷ್ಟ್ರೀಯ ಸಮ್ಮೇಳನ: ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಒಮ್ಮುಖ ಜವಾಬ್ದಾರಿ’ ಎಂಬ ಕಲ್ಪನೆಯಡಿಯಲ್ಲಿ ಪ್ರಸ್ತುತ ಸಮ್ಮೇಳನ ಜರುಗಲಿದೆ.

ಶಿಕ್ಷಣ ತಜ್ಞ ಪ್ರೊ. ಲಿಯೋನೆಲ್ ಅರಾನ್ಹಾ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪ್ರೊ. ಇಸ್ಮಾಯಿಲ್ ಹಾಕ್ಕಿ, ನಿರ್ದೇಶಕ, ಸ್ಕೂಲ್ ಆಫ್ ಎಜುಕೇಷನಲ್ ಸೈನ್ಸಸ್, ಅಂಕಾರಾದ ಹಸೆಟೆಪೆ ವಿಶ್ವವಿದ್ಯಾಲಯ ಟರ್ಕಿ, ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಪ್ರೊ. ಡೆನ್ನಿಸ್ ಕ್ವಿಲಾಲಾ, ಡಿಲಿಮನ್ ವಿಶ್ವವಿದ್ಯಾಲಯ, ಫಿಲಿಪೈನ್ಸ್, ಅವರು ‘ಆಚರಣೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಪರಿಚಯ’ ಮತ್ತು ಏಷ್ಯಾದಲ್ಲಿ ಕ್ರಿಶ್ಚಿಯನ್ ಉನ್ನತ ಶಿಕ್ಷಣದ ದಕ್ಷಿಣ ಏಷ್ಯಾ ಯುನೈಟೆಡ್ ಮಂಡಳಿಯ ನಿರ್ದೇಶಕ ಡಾ. ಮಹೇರ್ ಸ್ಪರ್ಜನ್ ಅವರು ‘ಪರಿಸರ ಜವಾಬ್ದಾರಿಯೊಂದಿಗೆ ಸಂಪೂರ್ಣ ವ್ಯಕ್ತಿಯ ಅಭಿವೃದ್ಧಿ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಶಿಕ್ಷಣದಲ್ಲಿ ಸುಸ್ಥಿರತೆಯ ಏಕೀಕರಣವನ್ನು ಅನ್ವೇಷಿಸಲು, ಪರಿಸರ ಜವಾಬ್ದಾರಿಯನ್ನು ಉತ್ತೇಜಿಸಲು, ಶಿಕ್ಷಣ ತಜ್ಞರಲ್ಲಿ ಜಾಗತಿಕ ಸಹಯೋಗವನ್ನು ಬೆಳೆಸಲು ಮತ್ತು ಭವಿಷ್ಯದ ಪೀಳಿಗೆಗೆ ಅಧಿಕಾರ ನೀಡುವ ಉದ್ದೇಶವನ್ನು ಇರಿಸಿಕೊಂಡು ಪ್ರಸ್ತುತ ಸಮ್ಮೇಳನ ಜರುಗಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article