ಕಾಳಾದ್ರಿ ಸಾನಿಧ್ಯಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ

ಕಾಳಾದ್ರಿ ಸಾನಿಧ್ಯಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ


ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಸಜೀಪ ಮಾಗಣೆಯ ಬಿಲ್ಲಂಪದವು ಕಾಳಾದ್ರಿ ಸಾನಿಧ್ಯಕ್ಕೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್  ಭೇಟಿ ನೀಡಿದರು.

ಈ ಸಂದರ್ಭ ಶಾಸಕರ ನಿಧಿಯಿಂದ 15 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕ್ಷೇತ್ರದ ಸಂಪರ್ಕ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿ ಮುಂದಿನ ದಿನಗಳಲ್ಲು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆಯಿತ್ತರು.

ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಮುಳ್ಳ ವೆಂಕಟೇಶ್ವರ ಭಟ್, ರಾಮಕೃಷ್ಣ ಭಟ್ ಪುಣ್ಕೆ ಮಜಲು, ರವೀಂದ್ರನಾಥ ಭಂಡಾರಿ, ಪ್ರವೀಣ್ ಆಳ್ವ, ಶಿವರಾಮ ಭಂಡಾರಿ, ಪ್ರವೀಣ್ ಶೆಟ್ಟಿ, ಕೆ. ರಾಧಾಕೃಷ್ಣ ಆಳ್ವ, ದೇವದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article