.jpeg)
ಮತ್ತೆ ಹಾಲು ದರ ಏರಿಕೆ, ಕಾಂಗ್ರೆಸ್ನಿಂದ ಜನರಿಗೆ ನಿತ್ಯ ಬರೆ: ಸತೀಶ್ ಕುಂಪಲ
Saturday, March 29, 2025
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಮೂರನೇ ಬಾರಿ ಹಾಲಿನ ದರವನ್ನು ಏರಿಕೆ ಮಾಡಿದೆ. 2023 ರಿಂದ ಈ ವರೆಗೆ ಒಟ್ಟು 9 ರೂ. ಏರಿಕೆ ಮಾಡಿ ಜನರ ಬದುಕಿಗೆ ನಿರಂತರ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಇಂತಹ ಜನವಿರೋಧಿ ಸರ್ಕಾರ ತೊಲಗದಿದ್ದರೆ ಸಾರ್ವಜನಿಕರಿಗೆ ನೆಮ್ಮದಿಯಿಲ್ಲ. ಯುಗಾದಿ ಹಬ್ಬಕ್ಕೆ ಬೆಲ್ಲ ಸವಿಯಲು ಬಿಡದೆ ಕಹಿಯನ್ನು ನೀಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಹೆಸರೇಳಿ ದರ ಏರಿಕೆ ಮಾಡಿರುವ ಭಂಡ ಸರ್ಕಾರ ಕಳೆದ 5 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡದೆ ಮೋಸಗೊಳಿಸಿದೆ. ಏನೂ ಮಾಡಿದರೂ ನಡೆಯುತ್ತದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಹಾಳು ಮನಸ್ಥಿತಿಯಿಂದ ಜನರು ಭವಣೆ ಪಡುತ್ತಿದ್ದಾರೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜನರು ಪ್ರತಿಭಟಿಸುವುದು ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.