ಮೂಡುಬಿದಿರೆ: ಗುರು ಬಸದಿಯಲ್ಲಿ ವಾರ್ಷಿಕ ಮಹೋತ್ಸವ

ಮೂಡುಬಿದಿರೆ: ಗುರು ಬಸದಿಯಲ್ಲಿ ವಾರ್ಷಿಕ ಮಹೋತ್ಸವ


ಮೂಡುಬಿದಿರೆ: ಇಲ್ಲಿನ ಗುರುಗಳ ಬಸದಿಯಲ್ಲಿ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಜೈನಮಠದ ಸ್ವಸಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಿತು.

ವೀತ ರಾಗ ಭಗವಂತ. ಸಂಸಾರದ ತಾಪತ್ರಯ ದೂರ ಮಾಡುವ ಸರ್ವಜ್ಞ ದೇವರು. ಮಾನವ ಕಲ್ಲಿನಲ್ಲಿ ದೇವರ ಮಹಿಮೆ ಗುಣ ನೋಡಿ ತನ್ನಲ್ಲಿರುವ ಕಲ್ಮಶ ಭಾವ ತೊರೆದು ನಿಷ್ಕಲ್ಮಶವಾಗಬಹುದೆಂದು ಭಟ್ಟಾರಕ ಸ್ವಾಮೀಜಿ ನುಡಿದರು.

ತೋರಣ ಮಹೂರ್ತ, ತೀರ್ಥಂಕರರ ಅಭಿಷೇಕ, ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶೋಡಶೋಪಾಚಾರ ಪೂಜೆ, ಕ್ಷೇತ್ರ ಪಾಲ ಪೂಜೆ, ನಾಗ ದೇವರ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಕಲಿಕುಂಡ ಆರಾಧನೆ ಶಂಭವ್ ಕುಮಾರ್ ರಾಜೇಶ್ವರಿ ದಂಪತಿ ನೆರವೇರಿಸಿದರು.

ನಾಗೇಂದ್ರ ಪುರೋಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಸದಿಗಳ ಮೊಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಕೊಂಡೆಮನೆತನ, ಮಂಜುಳಾ ಅಭಯ ಚಂದ್ರ, ಶ್ರೀನಾಥ್ ಬಲ್ಲಾಳ್, ವೀರೇಂದ್ರ ಜೈನ್, ಬಾಹುಬಲಿ ಪ್ರಸಾದ್, ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article