
ಯುವ ಬಿರುವೆರ್ ಸಂಘಟನೆಯಿಂದ ವೈದ್ಯಕೀಯ ತಪಾಸಣಾ ಶಿಬಿರ
Sunday, March 23, 2025
ಮೂಡುಬಿದಿರೆ: ಯುವ ಬಿರುವೆರ್ (ರಿ) ಮಾಂಟ್ರಾಡಿ ಹಾಗೂ ಯುವ ಬಿರುವೆರ್ ಮಹಿಳಾ ಘಟಕ ಮಾಂಟ್ರಾಡಿ ಸಂಘಟನೆಯ ವತಿಯಿಂದ ಕೆಎಂಸಿ ಆಸ್ವತ್ರೆ ಅತ್ತಾವರ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈಯನ್ಸಸ್ ಮಂಗಳೂರು ಇವರ ನುರಿತ ತಜ್ಞ ವೈದ್ಯ ತಂಡದವರಿಂದ "ಉಚಿತ ವೈದ್ಯಕೀಯ ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಆಧಾರ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ತಪಾಸಣಾ ಶಿಬಿರ ಮಾಂಟ್ರಾಡಿ ಶಾಲಾ ವಠಾರದಲ್ಲಿ ನಡೆಯಿತು.
ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್ ಪೂಜಾರಿ ಅವರು ಉದ್ಘಾಟಿಸಿ, ಆರೋಗ್ಯದ ಕಾಳಜಿ ಬಗ್ಗೆ ವಿವರಿಸಿ ಸಂಘಟನೆಯ ಸಮಾಜ ಸೇವೆಯ ಬಗ್ಗೆ ಸಂಸುಕ್ತವಾಗಿ ವಿವರಿಸಿದರು. ಕೆಎಂಸಿ ಆಸ್ವತ್ರೆ ಅತ್ತಾವರ ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಹರ್ಬಟ್ ಪಿರೇರಾ ಅವರು ವೈದ್ಯಕೀಯ ಶಿಬಿರದ ಬಗ್ಗೆ ಕುಲಂಕುಶವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಯುವ ಬಿರುವೆರ್ (ರಿ) ಮಾಂಟ್ರಾಡಿ ಸಂಘಟನೆಯ ಅಧ್ಯಕ್ಷ ಮಧುಸೂದನ್ ಪೂಜಾರಿ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಮ್ಮ ಸಂಘಟನೆಯ ಗೌರವ ಸಲಹೆಗಾರ ಅಣ್ಣಿ ಪೂಜಾರಿ, ಮಾಂಟ್ರಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಕೊಟ್ಟಿಬೆಟ್ಟು, ನಮ್ಮ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಜನಿತಾ ಸದಾಶಿವ ಪೂಜಾರಿ, ಮಣಿಪಾಲ ಆಸ್ವತ್ರೆಯ ಡಾ. ನವ್ಯ, ಹಾಗೂ ಅಂಚೆ ಇಲಾಖೆಯ ಅಧಿಕಾರಿ ಅಕ್ಷತಾ ಉಪಸ್ಥಿತರಿದ್ದರು.
ಸುಮಾರು 3೦೦ ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸೆ, ಕಣ್ಣಿನ ತಪಾಸಣೆ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಲಾಯಿತು,