ದರ್ಶನ್ ನಡೆಸಿದ ಶತ್ರುಸಂಹಾರ ಯಾಗದಲ್ಲಿ ಕೊಲೆ ಆರೋಪಿ

ದರ್ಶನ್ ನಡೆಸಿದ ಶತ್ರುಸಂಹಾರ ಯಾಗದಲ್ಲಿ ಕೊಲೆ ಆರೋಪಿ

ಮಂಗಳೂರು: ಶತ್ರು ಸಂಹಾರ ಪೂಜೆಗೆ ಹೆಸರಾಗಿರುವ ಕೇರಳ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀಭಗವತಿ ದೇವಸ್ಥಾನದಲ್ಲಿ ಶನಿವಾರ ನಟ ದರ್ಶನ್ ಅವರು ಕುಟುಂಬ ಸಮೇತ ಭೇಟಿ ನೀಡಿ ಶತ್ರುಸಂಹಾರ ಯಾಗ ನಡೆಸಿದ್ದು, ಅಲ್ಲಿ ಕೊಲೆ ಆರೋಪಿ ಪ್ರಜ್ವಲ್ ರೈ ಕಾಣಿಸಿಕೊಂಡಿದ್ದಾಗಿ ಸುದ್ದಿಯಾಗಿದೆ.

2)17ರಲ್ಲಿ ದ.ಕ. ಜಿಲ್ಲೆಯಲ್ಲಿ ಜನರನ್ನು ಬೆಟ್ಟಿಬೀಳಿಸಿದ್ದ ಕರೋಪಾಡಿ ಅಬ್ದುಲ್ ಜಲಿಲ್‌ನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾತ ಕೂಡ ದೇವಸ್ಥಾನದ ಆವರಣದಲ್ಲಿ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.

ಈತ ಜಾಮೀನಿನ ಮೂಲಕ ಹೊರಗಿದ್ದು, ಈಗ ನಟ ದರ್ಶನ್ ಆತನೊಂದಿಗೆ ಕಾಣಿಸಿಕೊಂಡಿದ್ದು, ಆತನೇ ದೇವಸ್ಥಾನಕ್ಕೆ ಕರೆತಂದಿರಬಹುದು ಎಂಬ ಅನುಮಾನ ಮೂಡಿದೆ. 

ಪುತ್ತೂರು ಮೂಲದ ಸ್ನೇಹಿತರ ಮಾಗ್ರದರ್ಶನದಲ್ಲಿ ಕೇರಳಕ್ಕೆ ತೆರಳಿದ್ದ ದರ್ಶನ್ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಇದೀಗ ಈ ಫೋಟೊ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article