ಕುಕ್ಕೆಗೆ ವಿಧಾನ ಪರಿಷತ್ ಸಭಾಪತಿ ಭೇಟಿ

ಕುಕ್ಕೆಗೆ ವಿಧಾನ ಪರಿಷತ್ ಸಭಾಪತಿ ಭೇಟಿ


ಸುಬ್ರಹ್ಮಣ್ಯ: ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.

ಕುಕ್ಕೆಗೆ ಕುಟುಂಬಸ್ಥರೊಂದಿಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿ, ಬರಮಾಡಿಕೊಂಡರು. 

ಬಸವರಾಜ ಹೊರಟ್ಟಿ ಅವರು ಶುಕ್ರವಾರ ಕ್ಷೇತ್ರದ ವಸತಿಗ್ರಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ. 

ಕ್ಷೇತ್ರದಲ್ಲಿ ಸಂಜೆ ವೇಳೆ ಬಸವರಾಜ ಹೊರಟ್ಟಿ ಅವರು ರಥಬೀದಿ ಪರಿಸರದಲ್ಲಿ ಸುತ್ತಾಟ ನಡೆಸಿದರು. ರಥಬೀದಿರ ರಸ್ತೆ ಬದಿಗಳಲ್ಲಿ ಸಾಮಾನ್ಯರಂತೆ ಕುಳಿತು ಪರಿಸರದ ಸೌಂದರ್ಯ ವೀಕ್ಷಿಸಿದರು. ದೇವಸ್ಥಾನದ ಗೋಶಾಲೆಗೆ ತೆರಳಿ ಗೋವುಗಳ ಮೈ ಮುಟ್ಟಿ ಗೋವುಗಳ ಬಗ್ಗೆ ವಿಚಾರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article