ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ಪಣಂಬೂರು ವಾರ್ಡಿನ ತಣ್ಣೀರುಬಾವಿ ತೋಟ ಬೆಂಗ್ರೆ ಮುಖ್ಯ ರಸ್ತೆಯಿಂದ ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.

ಬಳಿಕ ಅವರು ಮಾತನಾಡಿ, ಇಲ್ಲಿನ ರಸ್ತೆ ಅಭಿವೃದ್ಧಿಯ ಅಗತ್ಯತೆ ಬಗ್ಗೆ ಸ್ಥಳೀಯರ ಬೇಡಿಕೆಯ ಅನುಸಾರವಾಗಿ ನಿಕಟ ಪೂರ್ವ ಪಾಲಿಕೆ ಸದಸ್ಯೆ ಸುನೀತಾಯವರು ನಿರಂತರವಾಗಿ ನನ್ನ ಗಮನಕ್ಕೆ ತಂದಿದ್ದರು. ಮುಂದುವರಿದು ಇದೀಗ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ವರದರಾಜ್ ಬೆಂಗ್ರೆ, ಮಂದಿರದ ಅಧ್ಯಕ್ಷರುಗಳಾದ ಸುಧಾಕರ ಸಾಲಿಯಾನ್, ಪ್ರಕಾಶ್ ಪುತ್ರನ್, ನವೀನ್ ಕುದ್ರೋಳಿ, ವಿಕ್ರಾಂತ್ ಕುದ್ರೋಳಿ, ಶ್ರೀಕಾಂತ್ ಬೆಂಗ್ರೆ, ಸೆಲೀಂ ಕಸಬಾ, ಸತ್ತಾರ್, ಹಸನಬ್ಬ, ಸೆಮೀರ್, ರಿಯಾಜ್, ಶಾಫಿ, ಮುತ್ತಮ್ಮ, ದಾಕ್ಷಾಯಿಣಿ, ಹೊನ್ನಮ್ಮ, ರಾಧಾ, ಕವಿತಾ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article