
ರಮೇಶ್ ಅರವಿಂದ್ ವಿದ್ ಮೀಡಿಯಾ..: ಕಾಲ ತಕ್ಕ ಸಿನಿಮಾ ಬಂದರೆ ಹಿಟ್..
ಪುತ್ತೂರು: ಕಲಾವಿದನೊಬ್ಬನಿಗೆ ತನ್ನ ಕಲೆಯನ್ನು ಪ್ರಸ್ತುತ ಪಡಿಸಲು ವೇದಿಕೆ ಬೇಕು. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಈ ಸಂಬಂಧ ಬೆಳೆಯುತ್ತದೆ ಎಂದಾದರೆ ನಾನು ಅದನ್ನೂ ಬಿಡುವುದಿಲ್ಲ. ಜನರಿಗೆ ರಿಯಾಲಿಟಿ ಶೋ ಗಳು ಇಷ್ಟವಾಗುತ್ತದೆ ಎನ್ನುವುದಾದರೆ ಅದನ್ನೂ ಮಾಡಬೆಕಾಗುತ್ತದೆ. ಕಾಂತಾರ ಸಿನಿಮಾ ಬಂದಾಗ ದೊಡ್ಡ ಹವಾ ಸೃಷ್ಠಿ ಮಾಡಿತು. ಹಾಗಾಗಿ ಕಾಲಕ್ಕೆ ತಕ್ಕ ಸಿನಿಮಾಗಳು ಬಂದರೆ ಹಿಟ್ ಆಗುತ್ತದೆ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು.
ಪುತ್ತೂರಿನಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು.
ನಾನು ಸಿನಿಮಾದ ನಟನೆಯನ್ನು ಕಡಿಮೆ ಮಾಡಿಲ್ಲ. ಹಿಂದೆ ವರ್ಷಕ್ಕೆ 9 ಚಿತ್ರಗಳನ್ನು ಮಾಡುತ್ತಿದೆ. ಈಗ ಅದರ ಸಂಖ್ಯೆ ಮೂರಕ್ಕೆ ಇಳಿದಿದೆ. ಒಂದು ಸಿನಿಮಾ ಮುಗಿಸಲು ಈಗ 2 ವರ್ಷ ಬೇಕಾಗುತ್ತದೆ. ಸಿನಿಮಾ ಇಂಡಸ್ಟ್ರಿ ಪ್ರೋಸೆಸ್ ಸ್ಲೋ ಆಗಿದೆ. ಹಾಗಂತ ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು. ನಾನು ಪ್ಯೂರಿಸ್ಟ್ ಬೇರೆಯದನ್ನು ಮುಟ್ಟುವುದಿಲ್ಲ ಅಂದರೆ ಕಾಲವನ್ನು ಎದುರು ಹಾಕಿಕೊಳ್ಳಲು ಕಷ್ಟ. ನಾವು ಮೌಲ್ಯ ಹಾಗೂ ಮೂಲಭೂತ ನಂಬಿಕೆಗಳನ್ನು ಬಿಡದೆ ಹೊಂದಿಕೊಳ್ಳುತ್ತೇವೆಯೋ ಅಷ್ಟು ಕಾಲ ಚಲಾವಣೆಯಲ್ಲಿ ಉಳಿಯುತ್ತೇತ್ಯಿಂದಿನ ದಿನಗಳಲ್ಲಿ ಅವಕಾಶಗಳನ್ನು ಬಳಸಿಕೊಂಡು ಸಂಬಂಧಗಳನ್ನು ಶ್ರೀಮಂತಗೊಳಿಸಿಕೊಳ್ಳುವುದು ಅಗತ್ಯ. ಒಂದು ಕ್ವಿಜ್ ನಲ್ಲಿ ಸ್ಕೋರರ್ ಆಗಿದ್ದ ನಾನು ವೀಕೆಂಡ್ ವಿದ್ ರಮೇಶ್ ಆಗುತ್ತೇನೆ ಎಂಬುವುದು ಯಾರಿಗೆ ಗೊತ್ತಿತ್ತು ಎಂದು ಪ್ರಶ್ನಿಸಿದ ಅವರು ಏನೇ ಮಾಡುವುದಿದ್ದರೂ ಶ್ರೇಷ್ಠವಾಗಿ ಮಾಡಬೇಕು ಎಂಬುವುದು ಮಾತ್ರ ನನ್ನ ತಲೆಯಲ್ಲಿದೆ ಎಂದರು.
ತುಳು ಚಿತ್ರರಂಗದ ಬಗ್ಗೆ ನನಗೆ ವಿಶೇಷ ಗೌರವವಿದೆ. ನಾನೂ ನಿರೆಲ್ ಎಂಬ ತುಳುಚಿತ್ದಲ್ಲಿ ಅತಿಥಿ ಪಾತ್ರ ಮಾಡಿದ್ದೆ. ನನ್ನ ಸಿನಿಮಾಗಳಲ್ಲಿಯೂ ತುಳು ಕಲಾವಿದರು ನಟಿಸಿದ್ದಾರೆ. ತುಳು ಸಿನಿಮಾಗಳು ತುಂಬಾ ಫೆಂಟಾಸ್ಟಿಕ್. ತುಳು ನಾಟಕಗಳೂ ತುಂಬಾ ಚೆನ್ನಾಗಿವೆ. ಯಕ್ಷಗಾನವೂ ಗೌರವ ತರುವಂತಹ ಕಲೆ. ಯಕ್ಷಗಾನ ಕಲಾವಿದರ ವಸ್ತ್ರದಲ್ಲಿ 58 ಗಂಟು ಇರುತ್ತದೆ. ಈ ಬಗ್ಗೆ ಒಂದು ಮೇಕಪ್ ಟೆಸ್ಟ್ ಮಾಡಿದ್ದೆ. ಅದು ತುಂಬಾ ವೈರಲ್ ಆಗಿತ್ತು. ಸಿನಿಮಾದಲ್ಲಿ ವಸ್ತ್ರವಿನ್ಯಾಸಕ್ಕಾಗಿ 5 ಜನ ಇರುತ್ತಾರೆ ಎಂದು ಅವರು ಹೇಳಿದರು.
ಕರಾವಳಿ ಭಾಗದ ಎಲ್ಲಾ ಬೀಚ್ ಗಳಲ್ಲಿ ಕುಣಿದಿದ್ದೇನೆ. ಇಲ್ಲಿಯ ವಾತವಾರಣ , ಜನರು ನನಗೆ ತುಂಬಾ ಇಷ್ಟ. ಕರಾವಳಿಯನ್ನು ಮರೆಯಲು ಸಾಧ್ಯವೇ ಇಲ್ಲ. ಕರಾವಳಿ ರಸ್ತೆಗಳು ಅತ್ಯಂತ ಸುಂದರ. ಇಲ್ಲಿನ ಜನತೆಗೆ ಕಟ್ಟಡ ರಸ್ತೆಗಳಲ್ಲಿರುವ ಅಭಿರುಚಿ ತುಂಬಾ ಶ್ರೀಮಂತವಾಗಿದೆ. ಹಾಗಾಗಿ ಇಲ್ಲಿ ಏನು ಇಷ್ಟ ಅಂತಾ ಕೇಳಿದರೆ ಹೇಳ್ತಾನೇ ಇರಬೇಕಾಗುತ್ತದೆ ಎಂದರು.