ಶ್ರೀರಾಮ ನವಮಿ: ಸುಮಾರು 250ಕ್ಕೂ ಅಧಿಕ ಭಜಕರಿಂದ ಮೂಡುಬಿದಿರೆ ಪೇಟೆಯಲ್ಲಿ ಮೊಳಗಿತು ಶ್ರೀರಾಮನಾಮ

ಶ್ರೀರಾಮ ನವಮಿ: ಸುಮಾರು 250ಕ್ಕೂ ಅಧಿಕ ಭಜಕರಿಂದ ಮೂಡುಬಿದಿರೆ ಪೇಟೆಯಲ್ಲಿ ಮೊಳಗಿತು ಶ್ರೀರಾಮನಾಮ


ಮೂಡುಬಿದಿರೆ: ಶ್ರೀ ರಾಮ ನವಮಿ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ), ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸಹಯೋಗದಲ್ಲಿ  ಶ್ರೀ ರಾಮ ನಾಮ ನಗರ ಸಂಕೀರ್ತನೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. 

ಉದ್ಯಮಿ ಶ್ರೀಪತಿ ಭಟ್, ಖ್ಯಾತ ವಕೀಲ ಜಯಪ್ರಕಾಶ್ ಭಂಡಾರಿ, ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಬಿಜೆಪಿ ಯುವ ನಾಯಕ ಕುಮಾರ್ ಪ್ರಸಾದ್, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ದೀಪ ಪ್ರಜ್ವಲನೆಯ ಮೂಲಕ ಶ್ರೀ ರಾಮ ನಾಮ ನಗರ ಸಂಕೀರ್ತನೆಗೆ ಚಾಲನೆ ನೀಡಿದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಪ್ರಾರಂಭವಾಗಿ ಪುರ ಪ್ರವೇಶಿಸಿ ನಿಶ್ಮಿತಾ ಸರ್ಕಲ್ ಬಳಿ ತೆರಳಿ ಹಿಂದೆ ದೇವಸ್ಥಾನಕ್ಕೆ ಬಂದು ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ನಗರ ಸಂಕೀರ್ತನೆ ಸಂಪನ್ನಗೊಂಡಿತು. ಸಂಘಟನೆ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಸೇವೆ ನಡೆಯಿತು.

ಆದಿ ಕಲ್ಚರಲ್ ಅಕಾಡೆಮಿ ಮೂಡುಬಿದಿರೆ, ಗಜಾನನ ಭಜನಾ ಮಂಡಳಿ ಒಂಟಿ ಕಟ್ಟೆ, ವಿಪ್ರ ಸಮಾಜ, ರಾಮಕ್ಷತ್ರಿಯ ಸೇವಾಸಂಘ, ಸತ್ಯನಾರಾಯಣ ಸೇವಾ ಸಮಿತಿ ಗಾಂಧಿನಗರ, ಸ್ವಾಮಿ ಶ್ರೀ ನಿತ್ಯಾನಂದ ಬಂಟರ ಮಹಿಳಾ ಭಜನಾ ಮಂಡಳಿ, ಮೂಡುಬಿದಿರೆ ಧರ್ಮಶಾಸ್ತ ಭಜನಾ ಮಂದಿರ, ಹಂಡೇಲು ಕಾಪಿಕಾಡ್ ಮಹಾಮಾಯಿ ಮಹಿಳಾ ಭಜನೆ ಮಂಡಳಿ ಕೊಡಂಗಲ್ಲು,ಶ್ರೀ ಗುರುರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ, ವಿಶ್ವಕರ್ಮ ಭಜನಾ ತಂಡ, ನಾಗಬ್ರಹ್ಮ ಭಜನಾ ಮಂಡಳಿ, ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸೇರಿದಂತೆ 12 ತಂಡಗಳು ನಗರ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜಿತ್ ಶೆಟ್ಟಿ ಹಾಗೂ ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸಂಚಾಲಕ ಪ್ರಥಮ್ ಎಸ್. ಬನ್ನಡ್ಕ, ಜವನೆರ್ ಬೆದ್ರ ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಬಾಬು ಪೂಜಾರಿ, ಜವನೆರ್ ಬೆದ್ರ ರಕ್ತ ನಿಧಿಯ ಸಂಚಾಲಕ ಮನು ಆಚಾರ್ಯ, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಪ್ರಮುಖರಾದ ಅರುಣ್ ಕುಮಾರ್, ಸುರೇಶ್ ಕಾಯರಗುಂಡಿ, ರಂಜು ಮಿಜಾರ್, ಅಕ್ಷಯ್ ಕುಮಾರ್, ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್ ಸಂಘಟನಾ ಕಾರ್ಯದರ್ಶಿ ಸಾರಿಕಾ ಹೆಗ್ಡೆ, ಸಹ ಸಂಚಾಲಕಿ ಸೌಮ್ಯ, ಅಮಿತಾ, ಸುಕನ್ಯ, ಸ್ಮಿತಾ ಹೊಳ್ಳ,  ಶೋಭಾಲತಾ ಮತ್ತಿತರರು ಉಪಸ್ಥಿತರಿದ್ದರು.

ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article