ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕದ ಯಂತ್ರದ ಉದ್ಘಾಟನೆ

ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕದ ಯಂತ್ರದ ಉದ್ಘಾಟನೆ


ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕದ ಯಂತ್ರದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಲಾಯಿತು. ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡ್ ದೀಪ ಬೆಳಗಿಸಿ ಉದ್ಘಾಟಿಸಿದರು. 

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ವೈಜ್ಞಾನಿಕ ಮಣ್ಣಿನ ವಿಶ್ಲೇಷಣೆಯ ಮೂಲಕ ಉತ್ತಮ ಬೆಳೆ ಇಳುವರಿಯನ್ನು ಸಾಧಿಸಲು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣಿನ ಪರೀಕ್ಷಾ ಘಟಕವನ್ನು ಆರಂಭಿಸುತ್ತಿದ್ದೇವೆ. ರೈತರು ಸುಮಾರು ಅಂದಾಜು 500 ಗ್ರಾಂ.ನಷ್ಟು ಮಣ್ಣಿನ ಮಾದರಿಯನ್ನು ಶುದ್ಧ ಪಾಲಿಥಿನ್ ಕವರಿನಲ್ಲಿ ಪುತ್ತೂರು ಕ್ಯಾಂಪ್ಕೋ ಶಾಖೆಗೆ ಕೊಡಬೇಕು. ನಿಖರವಾದ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು, ಸರಿಯಾದ ಮಣ್ಣಿನ ಮಾದರಿ ವಿಧಾನವನ್ನು ಬಳಸಿಕೊಂಡು ಪ್ರಯೋಗಾಲಯಕ್ಕೆ ತರಬೇಕು. ಒಂದು ಹೊಲದ ಅನೇಕ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಅಂತಿಮ ಮಣ್ಣಿನ ಮಾದರಿಯನ್ನು ಕ್ಲೀನ್ ಮತ್ತು ಲೇಬಲ್ ಮಾಡಲಾದ ಪಾಲಿಥಿನ್ ಕವರಿನಲ್ಲಿ ಕಳಿಸಿಕೊಡಬೇಕು ಎಂದು ಮಾಹಿತಿ ನೀಡಿದರು.

ಈ ಮಣ್ಣು ಪರೀಕ್ಷಾ ಯಂತ್ರವು ಮಣ್ಣಿನಲ್ಲಿರುವ 12 ಪ್ರಮುಖ ಪೋಷಕಾಂಶಗಳನ್ನು ವಿಶ್ಲೇಷಿಸುವ ಜೊತೆಗೆ ಪೋಷಕಾಂಶಗಳ ನಿರ್ವಹಣೆಗೆ ಸಂಕ್ಷಿಪ್ತ ಶಿಫಾರಸುಗಳನ್ನು ನೀಡುತ್ತದೆ. ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಪ್ರತಿ ಮಾದರಿಗೆ ರೂ. 300 ದರವನ್ನು ನಿಗದಿಪಡಿಸಲಾಗಿದೆ. ರೈತರು ಮಣ್ಣಿನ ಪೋಷಕಾಂಶಗಳ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಮಣ್ಣಿನಲ್ಲಿ ಅತಿ ಹೆಚ್ಚು ಪೋಷಕಾಂಶ ಮತ್ತು ಪೋಷಕಾಂಶಗಳ ಕೊರತೆ ಎರಡು ಬೆಳೆಯ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ನಿಖರವಾದ ಮಣ್ಣಿನ ಪರೀಕ್ಷೆಯ ಮೂಲಕ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅತ್ಯಗತ್ಯ ಎಂದು ಅಧ್ಯಕ್ಷರು ಹೇಳಿದರು.

ಈ ಉತ್ತಮವಾದ ಸೇವೆಯನ್ನು ಕ್ಯಾಂಪ್ಕೋ ಸದಸ್ಯರುಗಳೆಲ್ಲ ಸದುಪಯೋಗ ಮಾಡಿಕೊಳ್ಳುವಂತೆ ವಿನಂತಿಸಿದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಬಿ.ವಿ., ನಿರ್ದೇಶಕ ರಾಘವೇಂದ್ರ ಕೆದಿಲ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ ಶೆಟ್ಟಿ, ಕ್ಯಾಂಪ್ಕೋ ಕೃಷಿ ಅಧಿಕಾರಿ ಶ್ರೀಕೃಷ್ಣ, ಪುತ್ತೂರು ಶಾಖಾ ವ್ಯವಸ್ಥಾಪಕ ಅಮರೇಶ ಭಟ್ ಹಾಗೂ ಎಆರ್‌ಡಿಎಫ್ ಮುಖ್ಯ ಅಧಿಕಾರಿ ಕೇಶವ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article