
ದ್ವಿಚಕ್ರ ಕಳ್ಳನ ಬಂಧನ
Saturday, April 12, 2025
ಪುತ್ತೂರು: ನಗರದ ದರ್ಬೆಯಿಂದ 2 ತಿಂಗಳ ಹಿಂದೆ ಕಾಣೆಯಾಗಿದ್ದ ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿರುವ ಪೊಲೀಸರು ಕಳವುಗೈದ ಆರೋಪಿಯನ್ನು ಬಂಧಿಸಿದ್ದಾರೆ.
ದರ್ಬೆ ಬಳಿಯ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದರಲ್ಲಿ ಸಿಬಂದಿಯ ಓಡಾಟಕ್ಕೆ ಅಂಗಡಿ ಮುಂದೆ ಇರಿಸಲಾಗಿದ್ದ ಬೈಕ್ ಫೆ.7 ರಂದು ಕಳವಾಗಿತ್ತು. ಈ ಕುರಿತು ಸಂಸ್ಥೆಯ ಮಾಲಕ ರತನ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕಳವಾದ ಬೈಕ್ ಹಾಸನದಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಕಳವು ಮಾಡಿದ ಆರೋಪಿ ಹಾಸನದ ಆಲೂರು ನಿವಾಸಿ ಗಗನ್(36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.