ಶಾಂತಿ ಕದಡುವಲ್ಲಿ ದುಷ್ಕರ್ಮಿಗಳು ಯಶಸ್ವಿ: ಸಿ.ಟಿ. ರವಿ

ಶಾಂತಿ ಕದಡುವಲ್ಲಿ ದುಷ್ಕರ್ಮಿಗಳು ಯಶಸ್ವಿ: ಸಿ.ಟಿ. ರವಿ


ಬಂಟ್ವಾಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಪೂರ್ವಯೋಜಿತ ಕೃತ್ಯವಾಗಿದೆ. ಹಿಂದೂ ಕಾರ್ಯಕರ್ತರಲ್ಲಿ ಭಯ ಹುಟ್ಟಿಸಿ, ಸಮಾಜದಲ್ಲಿ ಶಾಂತಿಕದಡುವ ಉದ್ದೇಶದ ಯೋಜನೆಯಲ್ಲಿ ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರೆ ಎಂದು ವಿ.ಪ. ಸದಸ್ಯ ಸಿ.ಟಿ. ರವಿ ಹೇಳಿದರು.

ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ ಅವರ ಹೆತ್ತವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೂ ಸಮಾಜ ಸುಹಾಸ್ ಶೆಟ್ಟಿ  ಹಂತಕರನ್ನು ಸುಮ್ಮನೆ ಬಿಡುವ ಮಾನಸಿಕತೆಯಲ್ಲಿ ಇಲ್ಲ, ಆತ್ಮರಕ್ಷಣೆಗೆ ಇಟ್ಟಕೊಂಡಿದ್ದ ಆಯುಧಗಳನ್ನು ಪೊಲೀಸ್ ಇಲಾಖೆ ತಪಾಸಣೆ ನೆಪದಲ್ಲಿ ನಿರಾಯುಧನ್ನಾಗಿ ಮಾಡಿದ್ದು, ಬಳಿಕ ಸುಹಾಸನ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನೊಂದು ವಿಕೆಟ್ ಬೀಳಲಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ಸಮಾಜದಲ್ಲಿ ಅಶಾಂತಿ ನಿರ್ಮಿಸುವ ಪ್ರಯತ್ನವನ್ನು ದುಪ್ಕರ್ಮಿಗಳು ಮಾಡುತ್ತಿದ್ದು, ಸರಕಾರ ರಕ್ಷಣೆ ನೀಡದೆ ನಮ್ಮನ್ನು ನಾವೇ ರಕ್ಷಣೆ ಮಾಡಬೇಕೆಂದುಕೊಂಡರೆ ನಾವೇನು ಹಿಂಜರಿಯುವ ಪ್ರಶ್ನೆಯೇ ಇಲ್ಲ ಅದನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಸುಹಾಸ್ ಶೆಟ್ಟಿ ಸಾವು ವ್ಯರ್ಥ ಆಗುವುದಿಲ್ಲ ಎಂದ ಅವರು ಜಿಲ್ಲೆಯಲ್ಲಿ ಹತ್ಯೆಯಾದಗಲೆಲ್ಲಾ ಪರಿಹಾರ ಘೋಷಣೆ ಮಾಡುವ, ಮೊಸಳೆ ಕಣ್ಣೀರು ಸುರಿಸುವ ಉಸ್ತುವಾರಿ ಸಚಿವರು ಈವಾಗ ಎಲ್ಲಿದ್ದಾರೆ, ಇಲ್ಲಿ ಬಂದು ಸಾಂತ್ವನ ಯಾಕೆ ಹೇಳಿಲ್ಲ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article