ನನ್ನ ಮಗನ ರಕ್ತಕ್ಕೆ, ಸಾವಿಗೆ ನ್ಯಾಯ ಸಿಗಬೇಕು: ಸುಲೋಚನಾ ಎಂ. ಶೆಟ್ಟಿ

ನನ್ನ ಮಗನ ರಕ್ತಕ್ಕೆ, ಸಾವಿಗೆ ನ್ಯಾಯ ಸಿಗಬೇಕು: ಸುಲೋಚನಾ ಎಂ. ಶೆಟ್ಟಿ


ಕುಪ್ಪೆಪದವು: ಗೃಹಸಚಿವ ಡಾ. ಜಿ. ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪದೇ ಪದೇ ನನ್ನ ಮಗ ರೌಡಿ ರೌಡಿ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಮಗ ಹಿಂದೂ ಕಾರ್ಯಕರ್ತ ಹಿಂದೂ ಸಮಾಜದ ಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದ ನನ್ನ ಮಗನ ಸಾವು ವ್ಯರ್ಥವಾಗಲು ಬಿಡಬಾರದು. ಅವನ ರಕ್ತಕ್ಕೆ, ಸಾವಿಗೆ ನ್ಯಾಯ ಸಿಗಬೇಕು. ರಾಜ್ಯದ ಸರಕಾರ ಪಿಎಫ್‌ಐ ಹೇಳಿದಂತೆ ಚಾರ್ಜ್ ಶೀಟ್ ತಯಾರಿಸುವ ಸಾಧ್ಯತೆ ಇದೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಎಂ. ಶೆಟ್ಟಿ ಆಗಗ್ರಹಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಭಾನುವಾರ ಹಮ್ಮಿಕೊಂಡಿದ್ದ  ‘ಬಜಪೆ ಚಲೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನನ್ನ ಮಗ ರೌಡಿಯಲ್ಲ ನನ್ನ ಮಗ ಭಜರಂಗದಳದ ಕಾರ್ಯಕರ್ತ. ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಮಗನ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಲು ಈ ಸರಕಾರ ಅವಕಾಶ ನೀಡುವುದಿಲ್ಲ. ತನಿಖೆಯನ್ನು ಎನ್ ಐಎಗೆ ವಹಿಸಬೇಕು. ಐವತ್ತಕ್ಕೂಹೆಚ್ಚು ಜನರು ಸುತ್ತುವರಿದು ನನ್ನ ಮಗನಿಗೆ ಚಿತ್ರ ಹಿಂಸೆ ಕೊಟ್ಟು ಕೊಂದು ಹಾಕಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article