
ಭಾರತದ ಒಳಿತಿಗಾಗಿ ಬ್ರಹ್ಮಕುಮಾರಿಸ್ ವತಿಯಿಂದ ಧ್ಯಾನ ಮತ್ತು ಪ್ರಾರ್ಥನೆ
Sunday, May 11, 2025
ಮಂಗಳೂರು: ವರ್ತಮಾನ ಪರಿಸ್ಥಿತಿಯ ವಿದ್ಯಾಮಾನಗಳನ್ನು ಗಮನಿಸಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ವತಿಯಿಂದ ವಿಶೇಷ ಧ್ಯಾನ ಮತ್ತು ಪ್ರಾರ್ಥನೆಯನ್ನು ಭಾರತ ದೇಶದ ಒಳಿತಿಗಾಗಿ ನಡೆಸಲಾಯಿತು.
ಪರಮಾಪಿತ ಪರಮಾತ್ಮನ ನೆನಪಿನ ಪ್ರಕಂಪನಗಳಿಂದ ಸಾಕಾರಾತ್ಮಕ ವಾತಾವರಣವನ್ನು ಮೂಡಿಸುವ ಈ ಈಶ್ವರಿಯ ಧ್ಯಾನವನ್ನು ಸಂಸ್ಥೆಯ ಸಮರ್ಪಿತ ಸೋದರಿಯರು ಮತ್ತು ಬ್ರಹ್ಮಕುಮಾರಿಸ್ ಮಂಗಳೂರಿನ ಸೋದರ ಸೋದರಿಯರು ಸೇರಿ ಮಾಡಿದರು.