
ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಡ: ಹರೀಶ್ ಕುಮಾರ್
Wednesday, May 28, 2025
ಮಂಗಳೂರು: ಬಂಟ್ವಾಳ ತಾಲೂಕಿನ ಕಾಂಬೋಡಿ ಇರಾಕೋಡಿಯಲ್ಲಿ ಪಿಕಪ್ ಚಾಲಕ ಅಬ್ದುಲ್ ರಹೀಂ ಅವರನ್ನು ಅಮಾನವೀಯ ರೀತಿಯಲ್ಲಿ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಖಂಡನೀಯ. ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಅಕಾರಿಗಳಿಗೆ ಒತ್ತಾಯಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಅಬ್ದುಲ್ ರಹೀಂ ಹಾಗೂ ಕಲಂದರ್ ಶಾಫಿ ದುಡಿದು ತಿನ್ನುವ ಸಾಮಾನ್ಯ ಕುಟುಂಬದವರಾಗಿದ್ದು, ಊರಲ್ಲಿ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.
ವೈಯಕ್ತಿಕವಾಗಿ ಯಾವುದೇ ಕ್ರಿಮಿನಲ್ ಹಿನ್ನಲೆ ಅವರಿಗಿಲ್ಲ. ಇಂತಹ ಅಮಾಯಕರನ್ನು ಸಮಾಜಘಾತುಕ ಶಕ್ತಿಗಳು ಟಾರ್ಗೆಟ್ ಮಾಡಿ ಕೊಲೆ ಮಾಡಿರುವುದು ಅಮಾನವೀಯ ಮತ್ತು ದುಷ್ಕರ್ಮಿಗಳ ವಿಕೃತಿ ಮನಸ್ಥಿತಿಯನ್ನು ಹೇಳುತ್ತಿದೆ. ಇಂತಹ ದುಷ್ಕರ್ಮಿಗಳನ್ನು ಸಂಪೂರ್ಣ ಮಟ್ಟಹಾಕುವ ಕೆಲಸವಾಗಬೇಕಿದೆ ಎಂದು ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.