
‘ಪ್ರಜಾಸೌಧ’ ಆಧುನಿಕ ನವಮಂಗಳೂರಿಗೆ ತೆರೆದ ಹೆಬ್ಬಾಗಿಲು: ಸ್ಪೀಕರ್
ಮಂಗಳೂರು: ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ ಮಂಗಳೂರಿನ ಆಧುನಿಕ ನವಮಂಗಳೂರಿನ ಅಭಿವೃದ್ಧಿಯ ಹೆಬ್ಬಾಗಿಲಿಗೆ ತೆರೆದ ಕಟ್ಟಡವಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ಇಂದು ನಗರದ ಪಡೀಲ್ನಲ್ಲಿ ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ‘ಪ್ರಜಾಸೌಧ’ವನ್ನು ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
‘ಪ್ರಜಾಸೌಧ’ವು ಕಟ್ಟಕಡೆಯ ಜನರಿಗೂ ಕೆಲಸ ಮಾಡಿಕೊಡುವ ಕೆಲಸ ಮಾಡಿಕೊಡುವ ಸೌಧವಾಗಬೇಕು. ಜಿಲ್ಲೆಯ ಕಡುಬಡವರ ಕೆಲಸ ಮಾಡಿಕೊಡುವ ಸೌಧವಾಗಬೇಕು. ಇಲ್ಲಿಗೆ ಬಂದವವರು ನೆಮ್ಮದಿಯಿಂದ ಹಿಂದಿರುಗುವ ರೀತಿಯಲ್ಲಿ ಕೆಲಸ ಆಗಬೇಕು ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ನಗರಪ್ರದೇಶದ ಕಾಡಾಗಿದ್ದ, ಹಾವುಗಳು ಸೇರಿಕೊಂಡಿದ್ದ, ತಳ ಅಂತಸ್ತಿನಲ್ಲಿ ನೀರು ನಿಂತ ಕಟ್ಟಡವನ್ನು ನಮಗೆ ನೀಡಿದ್ದು, ಈಗ ಜಿಲ್ಲೆಯೇ ಹೆಮ್ಮೆ ಪಡುವ ರೋಪದಲ್ಲಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದೇವೆ. 2 ವರ್ಷದ ಸಾಧನೆಯ ಲೆಕ್ಕದಲ್ಲಿ ಈ ಸೌಧವನ್ನು ನಿರ್ಮಿಸಿಕೊಟ್ಟಿದ್ದೇವೆ.ಮುಂದಿನ ಮೂರು ವರ್ಷದಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಿ ತೋರಿಸುತ್ತೇವೆ ಎಂದ ಅವರು ಜಿಲ್ಲೆಯಲ್ಲಿ ಕೇವಲ 6 ತಿಂಗಳಿನಲ್ಲಿ 8 ಸಾವಿರ ಜನರಿಗೆ ಆರ್ಟಿಸಿ ನೀಡುತ್ತಿದ್ದು, ಮುಂದಿನ ವಂದುವರೆ ವರ್ಷದಲ್ಲಿ 80 ಸಾವಿರ ರೈತರಿಗೆ ಆರ್ಟಿಸಿ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂದೂರಾವ್ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ 5.89 ಎಕ್ಕರೆಯಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಅವರ ಕನಸ್ಸಿನ ಯೋಜನೆ ಇಂದು ನನಸಾಗಿದೆ ಎಂದ ಅವರು ಒಂದೇ ಸೂರಿನಡಿ 32 ಇಲಾಖೆಗಳು ಬರುತ್ತಿದ್ದು, ಇದು ಜನರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರ ಬದುಕನ್ನು ಅಸನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸ್ಮಾಟ್ ಸಿಲಿ ಲಿಮಿಟೆಡ್ ದೇಶದ ಪ್ರಧಾನಮಂತ್ರಿ ಅವರ ಕನಸಾಗಿದ್ದು, ಈ ಯೋಜನೆಯಿಂದ ‘ಪ್ರಜಾಸೌಧ’ಕ್ಕೆ 50% ಅನುದಾನ ನೀಡಿದ್ದರಿಂದ ಈ ಕಾಮಗಾರಿ ಆಗಿದೆ ಇಲ್ಲದಿದ್ದಲ್ಲಿ ಈ ಕಾಮಗಾರಿ ಆಗುತ್ತಿರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯ ಅನುಧಾನವನ್ನು ಮೊತ್ತಮೊದಲ ಬಾರಿಗೆ ಪ್ರಜಾಸೌಧಕ್ಕೆ ಪ್ರಧಾನಮಂತ್ರಿಗಳು ನೀಡಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್., ನಾಶಿರ್ ಅಹಮದ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರುಗಳಾದ ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ, ಅಭಯ್ಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ನಿಗಮದ ಅಧ್ಯಕ್ಷರುಗಳಾದ ತಾರನಾಥ ಗಟ್ಟಿ, ಜೋಕಿಮ್ ಸ್ಟ್ಯಾನಿ, ಉಮಾರ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಪ್ರಮುಖರಾದ ಎಲ್.ಕೆ. ಅತೀಕ್, ರಾಜೇಂದ್ರ ಕುಮಾರ್ ಕಟಾರಿಯಾ, ಸಧಾನಂದ ಮಾವುಂಜಿ, ತುಳುಸಿ, ಜೆ. ಮಂಜುನಾಥ್, ಪಿ. ಸುನಿಲ್ ಕುಮಾರ್, ದೀಪಾ, ಜೆ.ಆರ್. ಲೋಬೊ, ಆನಂದ್ ಕೆ, ನಿತೇಶ್, ಅನುಪಮ್ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾಆರಿ ಮುಲ್ಲೈ ಮುಗಿಲನ್ ಎಂ.ಪಿ. ಸ್ವಾಗತಿಸಿದರು.