
ಶ್ರವಣ ತಪಾಸಣಾ ಶಿಬಿರಗಳ ಬಗ್ಗೆ ಜಾಗೃತಿ ಅಗತ್ಯ
ಮಂಗಳೂರು: ವಿವಿಧ ಸಂಘ ಸಂಸ್ಥೆಗಳು ಆಸ್ಪತ್ರೆಗಳು ಬಹಳಷ್ಟು ಕಡೆಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡುತ್ತಿದ್ದ ರೂ ಕಿವಿಗೆ ಸಂಬಂಧ ಪಟ್ಟ ತಪಾಸಣಾ ಶಿಬಿರಗಳ ಕೊರತೆ ಇದೆ.ಶ್ರವಣ ದೋಷ ವುಳ್ಳ ವರು ಸಮಾಜದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿ ಸುತ್ತಾರೆ.ಅವರ ತಪಾಸಣಾ ಶಿಬಿರ ಹೆಚ್ಚು ನಡೆಯ ಬೇಕಾಗಿದೆ.ಈ ಬಗ್ಗೆ ಜಾಗೃತಿ ಮೂಡಿಸ ಬೇಕಾಗಿದೆ ಎಂದು ಬೆಸೆಂಟ್ ಮಹಿಳಾ ಕಾಲೇಜು ಸಂಚಾಲಕ ಸತೀಶ್ ಭಟ್ ತಿಳಿಸಿದ್ದಾರೆ .
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಈಶ್ವರ್ ಮಲ್ಪೆ ಟೀಮ್ ಹಾಗೂ ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಬೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ಆಯೋಜಿಸಲಾದ ಉಚಿತ ಕಿವಿ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಗಳು ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುತ್ತಾ ಸಮಾಜದ ಅಭಿವೃದ್ಧಿ ಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.ಇಡೀ ಜಗತ್ತೇ ಫೋಲಿಯೋ ಮುಕ್ತ ವಾಗುವಲ್ಲಿ ರೋಟರಿ ಸಂಸ್ಥೆಯ ಗಣನೀಯ ಸೇವೆ ಸಲ್ಲಿಸಿದೆ. ಕಿವಿ ತಪಾಸಣಾ ಶಿಬಿರವು ಅಗತ್ಯವಾಗಿದೆ ಎಂದರು.
ರೋಟರಿ ಕ್ಲಬ್ ಮಂಗಳೂರು ಮಾಜಿ ಅಧ್ಯಕ್ಷರೂ, ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಡಾ. ದೇವದಾಸ ರೈ ರೋಟರಿ ಕ್ಲಬ್ ಮಂಗಳೂರು ಹಮ್ಮಿ ಕೊಂಡಿರುವ ಸಮಾಜ ಮುಖಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ಟೀಮ್ ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟೀಮ್ ಈಶ್ವರ್ ತಂಡದ ಶ್ರವಣ ತಜ್ಞೆ ಅಂಕಿತಾ ಕಲ್ಮಾಡಿ ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರಾಜಶೇಖರ್ ಹೆಬ್ಬಾರ್. ದ .ಕ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ರಾಜ್ ಗೋಪಾಲ್ ರೈ ಶುಭ ಹಾರೈಸಿದರು.
ರೋಟರಿ ಮಾಜಿ ಅಧ್ಯಕ್ಷ ರವಿ ಜಲನ್, ಸಮಾಜ ಸೇವ ನಿರ್ದೇಶಕ ಜಾಕ್ಸನ್ ಸಲ್ದಾನಾ , ಮಾಜಿ ಕಾರ್ಯದರ್ಶಿ ಪ್ರದೀಪ್ ಕುಲಾಲ್, ಮಂಜುನಾಥ್ ,ಇನ್ನರ ವೀಲ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷೆ ಗೀತಾ ಬಿ ರೈ ಉಪಸ್ಥಿತರಿದ್ದರು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿ, ನಿಯೋಜಿತ ಅಧ್ಯಕ್ಷ ಭಾಸ್ಕರ್ ರೈ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಜೇಶ್ ಸೀತಾರಾಂ ವಂದಿಸಿದರು.
ಇದೇ ಸಂದರ್ಭದಲ್ಲಿ ಟೀಮ್ ಈಶ್ವರ್ ಮಲ್ಪೆ ವತಿಯಿಂದ ಶ್ರವಣ ಯಂತ್ರ ವಿತರಿಸಲಾಯಿತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಅರ್ಹ ವೃದ್ಧರೋರ್ವರಿಗೆ ಶ್ರವಣ ಯಂತ್ರ ಅಳವಡಿಸಲು ಆರ್ಥಿಕ ಸಹಾಯವನ್ನು ನೀಡಲಾಯಿತು.