
ಗುಂಪು ಹತ್ಯೆ: ಮುಖ್ಯಮಂತ್ರಿ ಭೇಟಿ, ಅವಹಾಲು ಸಲ್ಲಿಕೆ
ಮಂಗಳೂರು: ಇತ್ತೀಚೆಗೆ ಕೇರಳ ವಯನಾಡ್ ನಿವಾಸಿ ಅಶ್ರಫ್ ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಯ ಕೃತ್ಯಕ್ಕೆ ಬಲಿಯಾಗಿದ್ದು, ಮೃತ ಅಶ್ರಫ್ನ ಕುಟುಂಬ, ಕೇರಳ ಮತ್ತು ಕರ್ನಾಟಕ ಕ್ರಿಯಾ ಸಮಿತಿ ಜಂಟಿಯಾಗಿ ನಿಯೋಗ ತೆರಳಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಕ್ರಮ ಮತ್ತು ಪರಿಹಾರಕ್ಕಾಗಿ ಅವಹಾಲು ಸಲ್ಲಿಸಿತು.
ಅಶ್ರಫ್ ಹತ್ಯೆ ನಡೆದು ಇಷ್ಟು ಅವಧಿ ಆದರೂ ಪ್ರಮುಖ ಆರೋಪಿಗಳ ಭಂದನ ಆಗಿರುವುದಿಲ್ಲ, ತನಿಖೆಗೆ ವಿಶೇಷ ತನಿಖಾ ತಂಡ ರಚನೆ, ವಿಶೇಷ ಅಭಿಯೋಜಕರ ನೇಮಕ ಮತ್ತು ಶೀಘ್ರ ನ್ಯಾಯ ಪ್ರಕ್ರಿಯೆ ನ್ಯಾಯಾಲಯಕ್ಕೆ ಪ್ರಕರಣದ ವರ್ಗಾವಣೆ ಎಂಬಿತ್ಯಾದಿ ಪ್ರಮುಖ ಬೇಡಿಕೆಯೊಂದಿಗೆ ನಿಯೋಗ ಮುಖ್ಯಮಂತ್ರಿ ಯವರಲ್ಲಿ ಚರ್ಚಿಸಿದೆ. ಮುಖ್ಯಮಂತ್ರಿಯವರು ಈ ಬಗ್ಗೆ ಉನ್ನತ ಪೊಲೀಸು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೋಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ. ನಿಯೋಗದಲ್ಲಿ ಪ್ರಮುಖವಾಗಿ ಮಂಜೇಶ್ವರ ಶಾಸಕ ಅಶ್ರಫ್ ಎ . ಕೆ.ಎಂ,ಮಂಗಳೂರು ಯಾಕ್ಷನ್ ಕಮಿಟಿ ಅಧ್ಯಕ್ಷರಾದ, ಮಾಜಿ ಮೇಯರ್ ಕೆ. ಅಶ್ರಫ್, ಕೇರಳ ಯಾಕ್ಷನ್ ಕಮಿಟಿ ಅಧ್ಯಕ್ಷ ನಾಸೀರ್ ಪರಪ್ಪೂರ್, ಜಲೀಲ್ . ಕೆ, ಅಹ್ಮದ್.ಎಂ, ಹಕ್ ಮಲಪ್ಪುರಂ ರೊಡನೆ ಕುಟುಂಬ ಸದಸ್ಯರು ಮತ್ತು ಮೃತ ಅಶ್ರಫ್ ತಂದೆ ಮತ್ತು ತಾಯಿ ಉಪಸ್ಥಿತರಿದ್ದರು.
ಖಂಡನೆ...
ಪುತ್ತೂರು ಸರ್ಕಾರಿ ಕಾಲೇಜು ಮತ್ತು ರೋಗಿಯೊಬ್ಬರ ಮಧ್ಯೆ ಸಂಭವಿಸಿ ಮುಕ್ತಾಯವಾಗಲಿದ್ದ ಕಿರು ಘಟನೆಯೊಂದಕ್ಕೆ ಪುತ್ತೂರಿನ ಸಂಘಿ ಅರುಣ್ ಕುಮಾರ್ ಪುತ್ತಿಲ ಮತ್ತು ಕೆಲವು ವೈದ್ಯರು ನಡೆಸಿದ ಮುಷ್ಕರ ರೀತಿಯ ಕೇಸರೀಕರಣವನ್ನು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆಕ್ಷೇಪ ಹೇಳಿಕೆಯನ್ನು ವೈದ್ಯಕೀಯ ಸೇವೆಗೆ ಭಂಗ ಎಂದು ನೀಡಿದ ಸುಳ್ಳು ದೂರು ಅನ್ನು ಪೊಲೀಸರು ತಿರಸ್ಕರಿಸಿದ ಹೊರತಾಗಿಯೂ ಕೂಡ ಪುತ್ತೂರಿನ ವೈದ್ಯಕೀಯ ತಂಡ ದೂರನ್ನು ಮುನೀರ್ ಕಾಟಿಪಳ್ಳ ಮತ್ತು ವರದಿ ಪ್ರಕಟಿಸಿದ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ ವಿರುದ್ಧ ಮುಂದುವರಿಸಿರುವುದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ದ. ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಆಶ್ರಫ್ ಖಂಡಿಸಿದ್ದಾರೆ.