
ಹಿಂದೂ ಯುವಕನ ಹತ್ಯೆ: ಆಸ್ಪತ್ರೆಗೆ ಶಾಸಕ ಕಾಮತ್ ಮಾಜಿ ಸಂಸದ ನಳಿನ್, ಪ್ರಮುಖರು ಭೇಟಿ
Thursday, May 1, 2025
ಮಂಗಳೂರು: ಬಜ್ಪೆಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ತಲ್ವಾರ್ ದಾಳಿಗೊಳಗಾಗಿದ್ದ ಯುವಕ ಸುಹಾಸ್ ಶೆಟ್ಟಿ ಸಾವಿಗೀಡಾಗಿದ್ದು ಆಕ್ರೋಶಭರಿತ ಹಿಂದೂ ಸಂಘಟನೆ ಕಾರ್ಯಕರ್ತರು ಎ.ಜೆ ಆಸ್ಪತ್ರೆಯ ಮುಂದೆ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹಾಗೂ ಹಿಂದೂ ಸಂಘಟನೆ ನಾಯಕರಾದ ಶರಣ್ ಪಂಪ್ ವೆಲ್ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.