
ಶಾಂತಿ ಸೌಹಾರ್ದತೆ ಕಾಪಾಡೋಣ: ಭಟ್ಟಾರಕ ಚಾರುಕೀತಿ೯ ಸ್ವಾಮೀಜಿ
Friday, May 2, 2025
ಮೂಡುಬಿದಿರೆ: ಬಹು ಹಿಂದಿನಿಂದಲೊ ನಮ್ಮ ರಾಜ್ಯದ ಕರಾವಳಿ ಜಿಲ್ಲೆ ಮತೀಯ ಸಾಮರಸ್ಯ ಸೌಹಾರ್ದತೆಗೆ ಹೆಸರಾದ ಜಿಲ್ಲೆ. ಕೆಲವು ಕೆಟ್ಟ ಶಕ್ತಿಗಳು ದೇಶದ ಕಾನೂನು ಕೈಗೆತ್ತಿಕೊಂಡು ಮತೀಯ ಸಾಮರಸ್ಯ ಕದಡಲು ಪ್ರಯತ್ನಿಸಿ ಅಶಾಂತಿಯ ವಾತಾವರಣ ಸೃಷ್ಠಿಸುತ್ತಿರುವುದು ಖಂಡನೀಯ.
ಅಂತಹ ಶಕ್ತಿಗಳನ್ನು ಸರಕಾರ ಹತ್ತಿಕ್ಕಿ ಶಿಕ್ಷೆಗೆ ಒಳ ಪಡಿಸಲಿ ಯಾರೂ ವದಂತಿಗಳಿಗೆ ಕಿವಿ ಗೊಡದೆ ಡಿಜಿಟಲ್ ಮಾಧ್ಯಮ ಸೇರಿದಂತೆ ಮತೀಯ ಭಾವನೆಗಳನ್ನು ಕೇರಳಿಸುವ ಕಾರ್ಯದಲ್ಲಿ ತೊಡಗಿಸಬಾರದಾಗಿ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ವಿನಂತಿ ಮಾಡಿದ್ದಾರೆ.