
ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ವತಿಯಿಂದ ಚಿಕಿತ್ಸೆಗೆ ನೆರವು
Friday, May 16, 2025
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್(ರಿ.) ಅಮನಬೆಟ್ಟು ಪಡುಮಾರ್ನಾಡ್ ಇದರ 62ನೇ ಸೇವಾ ಯೋಜನೆ ಅಂಗವಾಗಿ ನಲ್ಲೂರು ಪರಿಸರದ ಪ್ರಕಾಶ್ ಪೂಜಾರಿ ನಲ್ಲೂರು ಅವರ ಚಿಕಿತ್ಸೆಗೆ 10,000 ರೂ.ನ್ನು ನೀಡಲಾಯಿತು.
ಸಾಯಿ ಮಾನಾ೯ಡ್ ಸೇವಾ ಸಂಘದ ಸಕ್ರಿಯ ಸದಸ್ಯರಾಗಿರುವ ಪ್ರಕಾಶ್ ಪೂಜಾರಿ ಅವರು ಕಳೆದ ತಿಂಗಳು ಸ್ಕೂಟಿಯಲ್ಲಿ ಹೋಗುತ್ತಿರುವಾಗ ನಾಯಿ ಅಡ್ಡ ಬಂದು ಬಿದ್ದು ತೀವ್ರವಾಗಿ ಕೈಗೆ ಮತ್ತು ಕಾಲಿಗೆ ಪೆಟ್ಟಾಗಿತ್ತು. ಆಪರೇಷನ್ ಮಾಡಲು ಆಥಿ೯ಕ ಸಮಸ್ಯೆ ಇರುವುದನ್ನು ಮನಗಂಡು ಸೇವಾ ಸಂಘ ದಿಂದ ತುರ್ತು ಯೋಜನೆ ಮೂಲಕ 10,000 ರೂ.ನ್ನು ನೀಡಿದ್ದಾರೆ.