ನೈತಿಕತೆ ಇದ್ದಲ್ಲಿ ಪ್ರವಿಣ್ ನೆಟ್ಟಾರು ನಂತರದ ಕೇಸ್‌ಗಳನ್ನು ಎನ್‌ಐಎಗೆ ವಹಿಸಲಿ: ಐವನ್ ಡಿಸೋಜ

ನೈತಿಕತೆ ಇದ್ದಲ್ಲಿ ಪ್ರವಿಣ್ ನೆಟ್ಟಾರು ನಂತರದ ಕೇಸ್‌ಗಳನ್ನು ಎನ್‌ಐಎಗೆ ವಹಿಸಲಿ: ಐವನ್ ಡಿಸೋಜ


ಮಂಗಳೂರು: ಪ್ರವೀಣ್ ನೆಟ್ಟಾರು ಬಳಿಕ ಯಾವೆಲ್ಲಾ ಕೊಲೆಗಳಾಗಿವೆಯೋ ಅದನ್ನೆಲ್ಲಾ ಎನ್‌ಐಎಗೆ ವಹಿಸಲಿ. ನಮ್ಮ ಸಂಸದರು ಕೇವಲ ಸುಹಾಸ್ ಶೆಟ್ಟಿಯ ಕೇಸ್‌ನ ಆಸಕ್ತಿ ವಹಿಸಿ ಕೇಂದ್ರಸರ್ಕಾರದ ಜೊತೆ ಮಾತನಾಡುವುದಲ್ಲ. ನೈತಿಕತೆ ಇದ್ದಲ್ಲಿ ಅವರು ಪ್ರವಿಣ್ ನೆಟ್ಟಾರು ನಂತರ ಎಲ್ಲಾ ಪ್ರಕರಣಗನ್ನು ಎನ್‌ಐಎಗೆ ವಹಸಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.

ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಬಿಜೆಪಿಯ ರಾಜ್ಯ ಮುಖಂಡರು ದ.ಕ. ಜಿಲ್ಲೆಯ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ ಹಲವು ಮುಖಂಡರು ಸೋಮವಾರ ದ.ಕ.ಜಿಲ್ಲೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ದಾಟಿಯಲ್ಲಿ ಮಾತನಾಡಿದ್ದಾರೆ. ಕಾನೂನು ಪ್ರಕಾರ ಕಾರ್ಯಾಚರಿಸಲು ಪೊಲೀಸರಿಗೆ ಅವಕಾಶ ಕಲ್ಪಿಸುವ ಬದಲು ಬೆದರಿಕೆ ದಾಟಿಯಲ್ಲಿ ಮಾತನಾಡಿರವುದು ಸರಿಯಲ್ಲ. ರಾಜ್ಯದಲ್ಲಿ ಸರಕಾರ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಪೊಲೀಸ್ ಇಲಾಖೆ ಅವರ ಕೆಲಸ ಮಾಡುತ್ತಾರೆ. ತಮಗೆ ಬೇಕಾದ ಹಾಗೆ ಮಾಡಿಲ್ಲ ಅಂತ ಬಿಜೆಪಿಗರು ತಕರಾರು ತೆಗೆಯುವುದರಲ್ಲಿ ಅರ್ಥವಿಲ್ಲ ಎಂದರು.

ಪೊಲೀಸರು ಕಾನೂನು ಮೀರಿ ಕೆಲಸ ಮಾಡಿದ್ದರೆ ಅದಕ್ಕೆ ಸರಕಾರ, ಕಾನೂನು, ನ್ಯಾಯಾಲಯವಿದೆ. ಪೊಲೀಸರು ಸುಮ್ಮನಾದರೆ ಏನೂ ಮಾಡಿಲ್ಲ ಎಂದು ಆರೋಪಿಸುವ ಬಿಜೆಪಿಗರು, ಪೊಲೀಸರು ತಮ್ಮ ಕೆಲಸ ಮಾಡಿದರೆ ಆಕ್ಷೇಪಿಸುತ್ತಾರೆ. ಬಿಜೆಪಿಗರ ಉದ್ದೇಶವಾದರೂ ಏನು? ಜಿಲ್ಲೆ ಸದಾ ಅಶಾಂತಿಯಿಂದ ಕೂಡಿರಬೇಕೇ? ಅಭಿವೃದ್ಧಿಯು ಬಿಜೆಪಿಗೆ ಬೇಡವೇ? ಪೊಲೀಸ್ ಇಲಾಖೆಯಿಂದ ತಪ್ಪು ಆಗಿರುವುದಾದರೂ ಏನು? ಯಾರ ಮೇಲೆ ಸುಳ್ಳು ಕೇಸು ಹಾಕಲಾಗಿದೆ ಎಂಬುದನ್ನಾದರೂ ತಿಳಿಸಲಿ ಎಂದು ಸವಾಲು ಹಾಕಿದ ಐವನ್ ಡಿಸೋಜ, ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಚ್ಯುತಿತರುವ ಬಿಜೆಪಿ ಮುಖಂಡರ ಮೇಲೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರಿಗೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಅವರಿಗೆ ಬೇಕಾಗಿಲ್ಲ. ಕೇವಲ ಅವರ ಬೆಳವಣಿಗೆಯನ್ನು ನೋಡುತ್ತಿದ್ದಾರೆ. ಬಿಜೆಪಿಯವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುವುದಾಗಿ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.

ಪಕ್ಷದ ಮುಖಂಡರಾದ ನಾಗೇಂದ್ರ ಕುಮಾರ್, ಅಮೃತ್ ಕದ್ರಿ, ಸುಹಾನ್ ಆಳ್ವಾ, ದಿನೇಶ್ ಮುಳೂರು, ಭಾಸ್ಕರ್ ರಾವ್, ಪ್ರೇಮ್ ಬಲ್ಲಾಳ್‌ಬಾಗ್, ಜೇಮ್ಸ್ ಶಿವಬಾಗ್, ಸತೀಶ್ ಪೆಂಗಲ್, ಮನುರಾಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article