ವೈದ್ಯಕೀಯ ಸಂಶೋಧನಾ ಪ್ರಬಂಧ ಮಂಡನೆಯಲ್ಲಿ ಡಾ. ರೇಷ್ಮಾ ನಾಯರ್‌ಗೆ ಪ್ರಥಮ ಸ್ಥಾನ

ವೈದ್ಯಕೀಯ ಸಂಶೋಧನಾ ಪ್ರಬಂಧ ಮಂಡನೆಯಲ್ಲಿ ಡಾ. ರೇಷ್ಮಾ ನಾಯರ್‌ಗೆ ಪ್ರಥಮ ಸ್ಥಾನ


ಮಂಗಳೂರು: ಇತ್ತೀಚಿಗೆ ಮುಂಬೈಯಲ್ಲಿ ನಡೆದ ಮಕ್ಕಳ ಅರಿವಳಿಕೆ ಶಾಸ್ತ್ರಜ್ಞರ ಅಂತರಾಷ್ಟ್ರೀಯ ಸಮಾವೇಶದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗದ ಮೂರನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಡಾ. ರೇಷ್ಮಾ ನಾಯರ್ ಅವರು ವೈದ್ಯಕೀಯ ಸಂಶೋಧನಾ ಪ್ರಬಂಧ ಮಂಡನೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. 

ಈ ಪ್ರಬಂಧವನ್ನು ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗದ ವಿಭಾಗದ ಪ್ರಾಧ್ಯಾಪಕರು ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಅಧಿಕ್ಷಕರಾದ ಡಾ. ಸುಮಲತಾ ಆರ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. 

ಮಕ್ಕಳ ಅರಿವಳಿಕೆ ತಜ್ಞರ ವೈದ್ಯಕೀಯ ಸಮಾವೇಶವು ‘ಪೀಡಿಯಾಟ್ರಿಕ್ ಅನಸ್ತೇಶಿಯಾ: ಗ್ಲೋಬಲ್ ಎಜುಕೇಶನ್ ಅಂಡ್ ಸಿನರ್ಜಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಜೂ.6 ಮತ್ತು 7ರಂದು ನಡೆಯಿತು. ಇಲ್ಲಿ ಹಲವಾರು ಅಭ್ಯರ್ಥಿಗಳ ನಡುವೆ ನಡೆದ ತೀವ್ರವಾದ ಸ್ಪರ್ಧೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿ ಅವರು 

ಪ್ರಥಮ ಸ್ಥಾನವನ್ನು ಗಳಿಸಿದ್ದು, ಅವರನ್ನು ಅಭಿನಂದಿಸಲಾಗುತ್ತಿದೆ ಎಂದು ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article