ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ ‘ಕೃಷಿ ಪಂಡಿತ ಪ್ರಶಸ್ತಿ’

ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ ‘ಕೃಷಿ ಪಂಡಿತ ಪ್ರಶಸ್ತಿ’


ಮೂಡುಬಿದಿರೆ: ಕರ್ನಾಟಕ ರಾಜ್ಯ ಸರಕಾರ ಕೃಷಿ ಕ್ಷೇತ್ರದಲ್ಲಿನ ಸರ್ವಾಂಗೀಣ ಸಾಧನೆಗಾಗಿ ಕೊಡಮಾಡುವ 2023-24ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಮೂಡುಬಿದಿರೆಯ ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ ಲಭಿಸಿದೆ.

ಕೃಷಿ ಕ್ಷೇತ್ರದಲ್ಲಿ ವಿನೂತನ ಹಾಗೂ ಹೊಸ ಮತ್ತು ಸೃಜನಾತ್ಮಕ ಅನ್ವೇಷಣೆಯ ಕಾರ್ಯಗಳೊಂದಿಗೆ ಸಾಧನೆ ಮೆರೆದ ರೈತರಿಗೆ ಈ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯೊಂದಿಗೆ 50ಸಾವಿರ ನಗದು ಬಹುಮಾನವನ್ನು ಕೂಡ ನೀಡಲಾಗುತ್ತಿದೆ.

ಅಂಬೂರಿ ನಾಗರಾಜ ಶೆಟ್ಟಿ ಅವರು ತನ್ನ ಕೃಷಿ ಕ್ಷೇತ್ರದಲ್ಲಿ ಬಹು ವಿಧದ ಬೆಳೆಗಳನ್ನು ಅನುಷ್ಠಾನಗೊಳಿಸಿ ಉತ್ಪತ್ತಿ ಪಡೆಯುತ್ತಿರುವುದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ಕೃಷಿ ಕ್ಷೇತ್ರದಿಂದಾಗಿ ಗಮನ ಸೆಳೆಯುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article