
ಹಿಂದುಳಿದ ಕುಟುಂಬಕ್ಕೆ ನೂತನ ಮನೆ ‘ಹರಿ ಓಂ’ ಹಸ್ತಾಂತರ
ಮಂಗಳೂರು: ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು ಇವರ ವತಿಯಿಂದ ಹಾಗೂ ದಾನಿಗಳ ಸಹಯೋಗದೊಂದಿಗೆ ಬಿಜೆಪಿ ಮಂಗಳೂರು ದಕ್ಷಿಣ ಉಪಾಧ್ಯಕ್ಷ ಕಿರಣ್ ರೈ ಬಜಾಲ್ ಅವರ ನೇತೃತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬವಾದ ಯಮುನಾ ಪೂಜಾರಿ ಕುಟುಂಬಸ್ಥರೊಗೆ ನೂತನವಾಗಿ ನಿರ್ಮಿಸಿದ ‘ಹರಿ ಓಂ’ ಹೆಸರಿನ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಯಮುನಾ ಪೂಜಾರಿ ಕುಟುಂಬಕ್ಕೆ ಮನೆಯ ಕಿಲಿ ಕೈ ಹಸ್ತಾಂತರಿಸಿದ್ದು, ಕುಟುಂಬದ ಜೀವನಕ್ಕಾಗಿ ಒಂದು ಲಕ್ಷ ರೂಮೌಲ್ಯದ ಚೆಕ್ಕ್ ಹಸ್ತಾಂತರಿಸಿದರು.
ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಸ್ಥಾಪಿಸಿ ಹಿಂದೂ ಸಮಾಜ ಡಾ. ಕೇಸವ ಹೆಗಡವಾರ್ ಅವರು ಸಂಘವನ್ನು ಕಟ್ಟಿದ್ದರು ಮರಳಿನ ರಾಶಿಯಿಂದ ಮರಳುತೆಗೆದರೆ ಮತ್ತೆ ನೀರು ಬಂದು ಮುಚ್ಚುತ್ತದೆ ಅದರಂತೆಯೆ ಹಿಂದೂ ಸಮಾಜಕ್ಕೆ ಕೊಡುಗೆ ನೀಡುವುದೆ ನಮ್ಮ ಧರ್ಮ. ಕಿರಣ್ ರೈ ನೇತೃತ್ವದಲ್ಲಿ ಒಂದು ಬಡಕುಟುಂಬಕ್ಕೆ ಮನೆ ನೀಡುವುದು ಸಾಧನೆ, ಒಟ್ಟು 10 ಲಕ್ಷ ರೂ. ಮನೆ ಕಟ್ಟಿ ಜೊತೆಗೆ 1 ಲಕ್ಷ ರೂ. ಠೇವಣಿ ನೀಡಿರುವುದು ಶ್ಲಾಘನೀಯ. ಅದು ನಮ್ಮ ಕರ್ತವ್ಯ, ಅದು ನಮ್ಮ ಧರ್ಮ, ನಮ್ಮ ಹಿಂದೂ ಸಮಾಜವನ್ನು ಉಳಿಸಿ ಪ್ರಪಂಚವನ್ನು ಉಳಿಸಿಬೇಳೆಸಬೇಕು. ನಾವು ಹಿಂದೂ ಸಮಾಜಕ್ಕಾಗಿ ಬದುಕುವವರು, ನಾವು ಯಾರಿಗೂ ಹೆದರುವುದಿಲ್ಲ ಎಂದ ಅವರು ನಾವು ನಮ್ಮ ದೇಶದ ಪ್ರಧಾನಿಗಳಿಗೆ ಕೈಜೊಡಿಸಬೇಕು ಎಂದು ಹೇಳಿದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಈ ಒಂದು ಮನೆ ಕಟ್ಟಲು ಶ್ರಮ ವಹಿಸಿದ ಎಲ್ಲಾ ದಾನಿ ಹಾಗೂ ‘ಹರಿ ಓಂ’ ಸೇವಾ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದರು. ಕಷ್ಟದಲ್ಲಿರುವ ಹಿಂದೂ ಸಮಾಜಕ್ಕೆ ಕೈಜೊಡಿಸುವುದು ನಮ್ಮ ಕರ್ತವ್ಯ ಎಂಬುದು ಗುರುಗಳ ಮಾತು, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಹಸ್ತಾಂತರ ಮಾಡಿದರೆ ದೇವರು ಕೂಡ ಆಶಿರ್ವಾದ ನೀಡುತ್ತಾರೆ ಎಂದರು.
ನಾವು ಸಂಪಾದನೆ ಮಾಡಿದರಲ್ಲಿ ಬಡವರಿಗಾಗಿ ಇಂತಿಷ್ಟು ಮಿಸಲಿಡುವುದು ನಮ್ಮ ಕರ್ತವ್ಯ. ಹಿಂದುಳಿದ ವರ್ಗಕ್ಕೆ ನೀಡುವ ಸೌಲಭ್ಯಗಳನ್ನು ಎಲ್ಲರೂ ಉಪಯೋಗಿಸಬೇಕು ವಂಚಿತರಾಗಬಾರದು ಸ್ಥಳೀಯ ಕಾರ್ಯಕರ್ತರು ಇಂತಹ ಹಿಂದುಳಿದ ವರ್ಗದ ಕುಟುಂಬವನ್ನು ಗುರುತಿಸಿ ಸರಕಾರದ ಸೌಲಭ್ಯಗಳನ್ನು ತಿಳಿಸಿ ಉಪಯೋಗಿಸುಂತೆ ತಿಳಿಸಿದರು.
ಬಳಿಕ ಕಿರಣ್ ರೈ ಮಾತನಾಡಿ, ‘ಹರಿ ಓಂ’ ಸೇವಾ ಸಂಸ್ಥೆ ಬಡ ಕುಟುಂಬದ ಮನೆ ಬಿಳುತ್ತಿರುವ ಪರಿಸ್ಥಿತಿಯಲ್ಲಿರುವ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತೆ ಸುಮಾತಿ ಎಂಬವರು ತಿಳಿಸಿದ್ದು, ಮನೆಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದ ಸಂದರ್ಭದಲ್ಲಿ ನಾವೆಲ್ಲಾ ಒಂದುಗೂಡಿ ಮನೆ ನಿರ್ಮಾಣಕ್ಕೆ ಮುಂದುವರಿಸಿದೆವು ಕೊನೆಗೆ ಶಾಸಕರಾದ ವೇದವ್ಯಾಸ್ ಕಾಮತ್ ಅವರ ಸಹಯೋಗದೊಂದಿಗೆ ಮನೆ ನಿರ್ಮಾಣಕ್ಕೆ ಎಲ್ಲಾ ದಾನಿಗಳು ಸಹಕರಿಸಿದ ಹಿನ್ನೆಲೆ ಕೇವಲ 5 ತಿಂಗಳಲ್ಲಿ ಮನೆನಿರ್ಮಾಣಗೊಂಡಿತು ಮಾತ್ರವಲ್ಲ ಮನೆ ನಿರ್ಮಾಣಕ್ಕೆ ಸಹಕಾರ, ದಾನಿಗಳ ನೆರವು ಮನೆಗೆ ಬೇಕಾದ ಸಮಾಗ್ರಿಗಳು ಒದಗಿಬಂದವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಜೆ. ಅಭಿಷೇಕ್ ಶೆಟ್ಟಿಯವರಿಗೆ ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿದರು. ಉತ್ತಮ ಅಂಕ ಗಳಿಸಿದ ಯಮುನಾ ಪೂಜಾರಿಯ ಮೊಮ್ಮಕ್ಕಳು ಯಶ್ವಿತ ಹಾಗೂ ಕೀರ್ತಿ ಅವರನ್ನು ಗೌರವಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ ಅವರು ‘ಹರಿ ಓಂ’ ಸೇವಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ರಮೇಶ್ ಕಂದೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ಯಶೋಧರ ಚೌಟ, ರಮೇಶ್, ಹರೀಶ್, ರಾಜೇಶ್ ಶೆಟ್ಟಿ, ರಾಮಚಂದ್ರ ಆಳ್ವ, ವೀಣಾ ಮಂಗಳ, ಚಂದ್ರಾವತಿ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.