
ಡಾ. ಆನಂದ್ ವಿಜಯಪುರ ಡಿಸಿ: ದ.ಕ. ಸಿಇಒ ಆಗಿ ನರ್ವಾಡೆ ವಿನಾಯಕ್ ಕರ್ಭಾರಿ
Tuesday, July 8, 2025
ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಡಾ. ಆನಂದ್ ಕೆ. ಅವರಿಗೆ ವರ್ಗಾವಣೆಯಾಗಿದ್ದು, ವಿಜಯಪುರ ಜಿಲ್ಲಾಧಿಕಾರಿಯಾಗಿ ಡಾ. ಆನಂದ್ ಕೆ. ಅವರನ್ನು ಸರಕಾರ ನಿಯೋಜಿಸಿದೆ. ಡಾ. ಆನಂದ್ ಕೆ ಅವರ ವರ್ಗಾವಣೆಯಿಂದ ತೆರವಾಗಲಿರುವ ದ.ಕ. ಜಿ.ಪಂ ಸಿಇಒ ಹುದ್ದೆಗೆ 2021ರ ಬ್ಯಾಚ್ನ ಐಎಎಸ್ ಅಧಿಕಾರಿ ಹಾಗೂ ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿರುವ ನರ್ವಾಡೆ ವಿನಾಯಕ್ ಕರ್ಭಾರಿ ಅವರನ್ನು ನಿಯೋಜಿಸಲಾಗಿದೆ.