
ಖಾಸಗಿ ಸುದ್ದಿ ವಾಹಿನಿಯ ವಾಚಕ ವಾಸುದೇವ ಭಟ್ ಮಾನಾ೯ಡ್ ಗೆ ಜವನೆರ್ ಬೆದ್ರದಿಂದ ಸನ್ಮಾನ
Tuesday, July 1, 2025
ಮೂಡುಬಿದಿರೆ: ಕನ್ನಡದ ಖಾಸಗಿ ಸುದ್ದಿವಾಹಿನಿ ನ್ಯೂಸ್ ಫಸ್ಟ್ ನಲ್ಲಿ ಸುದ್ದಿವಾಚಕನಾಗಿ ಕಾರ್ಯನಿರ್ವಹಿಸುತ್ತಿರುವ ವಾಸುದೇವ್ ಭಟ್ ಅವರನ್ನು ಜವನೆರ್ ಬೆದ್ರ ಫೌಂಡೇಶನ್(ರಿ) ನಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಮಂಗಳವಾರ ಸನ್ಮಾನಿಸಲಾಯಿತು.
ಜವನೆರ್ ಬೆದ್ರ ಫೌಂಡೇಶನ್(ರಿ)ನ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಯುವ ಸಂಘಟನೆಯ ಸಂಚಾಲಕ ನಾರಯಣ ಪಡುಮಲೆ, ಯುವ ಸಂಘಟನೆಯ ಸಹ ಸಂಚಾಲಕ ರಾಜೇಶ್ ಕೆಲ್ಲಪುತ್ತಿಗೆ, ರಕ್ತನಿಧಿ ಸಂಚಾಲಕ ಮನು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್ ಮತ್ತಿತರರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.