
62ನೇ ವಷ೯ದ ಮೂಡುಬಿದಿರೆಯ ಗಣೇಶೋತ್ಸವ ಸಮಾಪ್ತಿ: ಇದೇ ಮೊದಲ ಬಾರಿಗೆ ಶೋಭಾಯಾತ್ರೆಯ ಮಧ್ಯೆಯಲ್ಲಿ ಸಾಗಿದ ಗಣಪ
ಈ ಬಾರಿಯ ಮೆರವಣಿಗೆಯಲ್ಲಿಲ್ಲ ಕುಣಿತ ಭಜನಾ ತಂಡಗಳು:
ಹುಲಿವೇಷ ಕುಣಿತ, ಚೆಂಡೆ ಕುಣಿತಗಳು ಶೋಭಾಯಾತ್ರೆಯಲ್ಲಿ ಮೆರಗು ನೀಡಿದರೂ ಕುಣಿತ ಭಜನೆಯ ತಂಡಗಳು ಈ ವಷ೯ದ ಮೆರವಣಿಗೆಯಲ್ಲಿ ಇಲ್ಲದಿರುವುದರಿಂದ ಭಜನೆ ಪ್ರಿಯರಿಗೆ ನಿರಾಸೆಯಾಗಿದೆ.
ಈ ಬಾರಿಯ ಗಣೇಶನಿಗೆ ಅಧ್ಯಕ್ಷರೇ ಚಾಲಕ..
ಕಳೆದ ಹಲವು ವಷ೯ಗಳಿಂದ ಸಮಿತಿಯ ಕಾಯ೯ದಶಿ೯ಯಾಗಿದ್ದ ನಾರಾಯಣ ಪಿ. ಎಂ. ಅವರು ಗಣಪತಿಯನ್ನು ವಿಸಜಿ೯ಸಲು ಸಾಗಿಸುವ ವಾಹನಕ್ಕೆ ಚಾಲಕರಾಗಿದ್ದರು ಈ ವಷ೯ವು ಅವರೆ ವಾಹನವನ್ನು ಚಲಾಯಿಸಿದ್ದು ಆದರೆ ಅವರು ಈ ವಷ೯ದ ಗಣೇಶೋತ್ಸವದ ಅಧ್ಯಕ್ಷರಾಗಿ ಗಣಪತಿಯ ವಾಹನಕ್ಕೆ ಚಾಲಕರಾಗಿದ್ದರು.
ಉತ್ತಮವಾಗಿ ಟ್ರಾಫಿಕ್ ನಿಭಾಯಿಸಿದ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ.
ಮೂಡುಬಿದಿರೆಯಲ್ಲಿ ಸಾವ೯ಜನಿಕವಾಗಿ ಅತೀ ವಿಜೃಂಭಣೆಯಿಂದ ಹಾಗೂ ಸೌಹಾರ್ದತೆಯೊಂದಿಗೆ ನಡಯುವ ಹಬ್ಬಗಳೆಂದರೆ ಅದು ಮೊಸರು ಕುಡಿಕೆ ಉತ್ಸವ ಮತ್ತು ಸಾವ೯ಜನಿಕ ಗಣೇಶೋತ್ಸವ.
ಈ ಎರಡೂ ಹಬ್ಬಗಳಲ್ಲಿಯೂ ಮೂಡುಬಿದಿರೆಯು ಸಾವಿರಾರು ಜನರು ಮತ್ತು ವಾಹನಗಳಿಂದ ತುಂಬಿ ಎದುರಾಗುವ ಸಮಸ್ಯೆಯೆಂದರೆ ಅದು ಟ್ರಾಫಿಕ್ ಸಮಸ್ಯೆ ಆದರೆ ಕಳೆದ ಎರಡು ವಷ೯ಗಳಲ್ಲಿ ಈ ಹಬ್ಬಗಳ ಸಂದಭ೯ದಲ್ಲಿ ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕರಾಗಿರುವ ಸಂದೇಶ್ ಪಿ. ಜಿ ಅವರು ತನ್ನ ಸಿಬಂಧಿಗಳ ಜತೆಗೂಡಿ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೇಟೆಯಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡಿದ್ದ ವಿವಿಧ ತಂಡಗಳ ಹುಲಿವೇಷದ ಕುಣಿತದಿಂದಾಗಿ ಪೇಟೆ ಜನರಿಂದ ತುಂಬಿಕೊಂಡಿತ್ತು. ಇದನ್ನು ಅರಿತಿದ್ದ ಸಂದೇಶ್ ಅವರು ಹಿಂದಿನ ದಿನವೇ ಸಾವ೯ಜನಿಕರು ತಮ್ಮ ವಾಹನವನ್ನು ಪೇಟೆಯಲ್ಲಿ ಪಾಕಿ೯ಂಗ್ ಮಾಡದಂತೆ ಪ್ರಕಟನೆ ನೀಡಿದ್ದರು ಇದು ಕೂಡಾ ಟ್ರಾಫಿಕ್ ಸಮಸ್ಯೆ ಯನ್ನು ನಿಭಾಯಿಸಲು ಅವರಿಗೆ ಸಹಕರಿಸಿ ಯಶಸ್ವೀಗೊಳಿಸಿತು.