ದರೆಗುಡ್ಡೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
Friday, August 15, 2025
ಮೂಡುಬಿದಿರೆ: ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತ್ಂತ್ರ್ಯ ಸಿಕ್ಕಿದೆ ಎಂಬುದನ್ನು ನಾವು ಮರೆಯಬಾರದು ಎಂದು ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಹೇಳಿದರು.
ಅವರು ದರೆಗುಡ್ಡೆ ಗ್ರಾ. ಪಂ. ನಲ್ಲಿ ಆಚರಿಸಿದ 79ನೇ ವಷ೯ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜವನ್ನರಳಿಸಿ ಮಾತನಾಡಿದರು.
ಪಂಚಾಯತ್ ಉಪಾಧ್ಯಕ್ಷೆ ನಳಿನಿ ಮತ್ತು ಸದಸ್ಯರು, ಪಿಡಿಒ ರಾಜು ಹಾಗೂ ಸಿಬಂದಿ ವಗ೯ದವರು ಈ ಸಂದಭ೯ದಲ್ಲಿದ್ದರು.