ಬೇಲೂರು ಮಠದ ಸ್ವಾಮೀಜಿಗಳ ಸಹಿತ ಸಂತರು ರಾಮಕೃಷ್ಣ ಆಶ್ರಮ, ಪೊಳಲಿ ಕ್ಷೇತ್ರಕ್ಕೆ ಭೇಟಿ

ಬೇಲೂರು ಮಠದ ಸ್ವಾಮೀಜಿಗಳ ಸಹಿತ ಸಂತರು ರಾಮಕೃಷ್ಣ ಆಶ್ರಮ, ಪೊಳಲಿ ಕ್ಷೇತ್ರಕ್ಕೆ ಭೇಟಿ


ಬಂಟ್ವಾಳ: ಪೊಳಲಿ ರಾಮಕೃಷ್ಣ ತಪೋವನಕ್ಕೆ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷಿನ್, ಬೇಲೂರ್ ಮಠ ಇದರ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಭೇಟಿ ನೀಡಿದರು.

ಇವರೊಂದಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ರಾಮಕೃಷ್ಣ ಮಠ ಅಲ್ಸೂರು ಇದರ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪನಂದಜಿ ಮಹರಾಜ್ ಮತ್ತು ರಾಮಕೃಷ್ಣ ಮಠದ ಇತರೆ  ಸ್ವಾಮೀಜಿಗಳನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಸ್ವಾಗತಿಸಿದರು.

ಈ ಸಂದರ್ಭ ಆಶೀರ್ವಚನಗೈದ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಪೊಳಲಿ ರಾಮಕೃಷ್ಣ ಮಠದ ಈ ಭೇಟಿ, ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ  ವಿಶೇಷ ಘಳಿಗೆಯಾಗಿರುತ್ತದೆ ಎಂದರು. 

ಸ್ವಾಮೀಜಿಯವರು ಇದೇ ವೇಳೆ ಭಕ್ತಾಧಿಗಳನ್ನು ಹಾಗೂ ಆಶ್ರಮದ ವಿದ್ಯಾರ್ಥಿಗಳನ್ನು ಆರ್ಶೀವದಿಸಿದರು. ಪೊಳಲಿ ರಾಮಕೃಷ್ಣರ ತಪೋವನಕ್ಕೆ ಸಂತರ ಭೇಟಿ ಸಂತಸವನ್ನು ತಂದಿದೆ ಎಂದು ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.

ಬಳಿಕ ಎಲ್ಲಾ ಸಂತರು ಐತಿಹಾಸಿಕ ಹಿನ್ನಲೆಯ ಪೊಳಲಿ ಶ್ರೀ ರಾಜರಾಜೇಶ್ವರಿಯ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article