‘ಹೊಸ ತಂತ್ರಜ್ಞಾನದೊಂದಿಗೆ ಗಣಿತ ಏಕೀಕರಣ’: ಕಾರ್ಯಗಾರ

‘ಹೊಸ ತಂತ್ರಜ್ಞಾನದೊಂದಿಗೆ ಗಣಿತ ಏಕೀಕರಣ’: ಕಾರ್ಯಗಾರ


ಮಂಗಳೂರು: ‘ಹೊಸ ತಂತ್ರಜ್ಞಾನದೊಂದಿಗೆ ಗಣಿತ ಏಕೀಕರಣ’ ಶಿಕ್ಷಕರಿಂದ ಶಿಕ್ಷಕರಿಗಾಗಿ ಕಾರ್ಯಾಗಾರವು ಸೆ.೮ ರಂದು ತೋಕೂರಿನ ಡಾ. ಎಂ. ರಾಮಣ್ಣ ಶೆಟ್ಟಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಶಿಕ್ಷಣದಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರವನ್ನು ವಿವರಿಸುತ್ತಾ, ಆಧುನಿಕ ಪರಿಕರಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಶಿಕ್ಷಕರನ್ನು ಒತ್ತಾಯಿಸಿದ ಅವರು ಡಿಜಿಟಲ್ ಯುಗದೊಂದಿಗೆ ಹೆಜ್ಜೆಹಾಕುತ್ತಾ ತಂತ್ರಾಜ್ಞಾನಗಳನ್ನು ಅಭ್ಯಸಿಸಿ, ಶಿಕ್ಞಣದಲ್ಲಿ ಅಳವಡಿಸಿಕೊಂಡಾಗ ಶಿಕ್ಷಕರು ಇನ್ನೂ ಸಬಲರಾಗುವಿರಿ ಎಂದು ಹೇಳಿದರು.


ಹ್ಯಾರಿಸ್ ಬರ್ಗ್‌ನ ಪೆನ್ ಸ್ಟೇಟ್‌ನ ಜೈವಿಕ ಇಂಧನ ಕೇಂದ್ರ ಪ್ರಯೋಗಾಲಯದ ನಿರ್ದೇಶಕ ಡಾ. ಆರ್.ವಿ. ಸಾಯಿರಾಮ್ ರುದ್ರಭಾಟ್ಲ ಮತ್ತು ಹ್ಯಾರಿಸ್ ಬರ್ಗ್ ಪೆನ್ ಸ್ಟೇಟ್‌ನ ಜೀವಶಾಸ್ರ್ತದ ಮುಖ್ಯ ವೈಜ್ಞಾನಿಕ ಅಧಿಕಾರಿ ಮತ್ತು ಸಹಾಯಕ ಬೋಧನಾ ಪ್ರಾಧ್ಯಾಪಕಿ ಡಾ. ಶೋಭಾ ರುದ್ರಭಾಟ್ಲ ಮಾತನಾಡಿ, ಶಿಕ್ಷಕರೆಲ್ಲರೂ ಆಧುನಿಕ ಶಿಕ್ಷಣ ಶಾಸ್ತ್ರದ ಮೂಲಾಧಾರವಾಗಿ ಪ್ರಾಯೋಗಿಕ ಮತ್ತು ಸಕ್ರಿಯ ಕಲಿಕೆಯನ್ನು ಸ್ವೀಕರಿಸಲು ಸ್ಪಷ್ಟ ಸಂದೇಶ ನೀಡಿ ‘ವಿದ್ಯಾರ್ಥಿ ಕೇಂದ್ರಿತ’ ತರಗತಿಗಳನ್ನು ನಿರ್ವಹಿಸಲು ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಹಾಗೂ ಕ್ರಿಯಾತ್ಮಕ ಚಿಂತನೆಗೊಳಗಾಗಲು ತಿಳಿಸಿದರು.

ನಿಟ್ಟೆಯ ಎನ್‌ಎಂಎಎಂಐಟಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ. ಮಾತನಾಡಿ, ಸಾಂಪ್ರದಾಯಿಕ ವಿಧಾನವನ್ನು ಮೀರಿ ಬೋಧನಾ ಅಭ್ಯಾಸದಲ್ಲಿ ನಾವೀನ್ಯತೆಯ ಅಗತ್ಯತೆಯ ಬಗ್ಗೆ ಹೇಳಿ, ಕುತೂಹಲಕಾರಿಯಾದ ತೊಡಗಿಸಿಕೊಳ್ಳುವ ಹೊಸ ತಂತ್ರಜ್ಙಾನವನ್ನು ಹುಟ್ಟುಹಾಕಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟರವರು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೂ ಶುಭ ಹಾರೈಸಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 18 ಸಿಬಿಎಸ್‌ಇ ಶಾಲೆಗಳ ಗಣಿತ ಶಿಕ್ಷಕರು ಸೆ.೮ ಹಾಗೂ 9 ರಂದು ನಡೆಯುವ ಈ ಕಾರ್ಯಾಗಾರದಲ್ಲಿ ಪಾಲುಗೊಳ್ಳುತ್ತಿದ್ದಾರೆ.

ಶಾಲಾ ಪ್ರಾಂಶುಪಾಲೆ ಶ್ರೀಲತಾ ರಾವ್ ಸ್ವಾಗತಿಸಿ, ಸ್ಮಿತಾ ಎಚ್.ಎಂ. ವಂದಿಸಿದರು. ಸಿರಿ ಉಡುಪ ಕಾರ್ಯಾಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article