ಎಕ್ಸಲೆಂಟ್ ವಿದ್ಯಾಥಿ೯ ವೇತನ ಪ್ರವೇಶ ಪರೀಕ್ಷೆ: 500ಕ್ಕಿಂತ ಲೂ ಅಧಿಕ ವಿದ್ಯಾಥಿ೯ಗಳು ಭಾಗಿ
ಪರೀಕ್ಷೆಗೆ ಪಾಲ್ಗೊಳ್ಳಲು ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಂಗಳೂರು, ಶಿವಮೊಗ್ಗ ಮತ್ತು ಇತರ ಹಲವು ಪ್ರದೇಶಗಳನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಮೂಲೆಗಳಿಂದ 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.
ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಅವರು ಸೇರಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ತಿಳಿಸಿದರು.ಎಕ್ಸಲೆಂಟ್ ವಿದ್ಯಾರ್ಥಿಯು COMEDK ನಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ ಪಡೆದಿದ್ದಾರೆ. PU ಮಂಡಳಿ ಪರೀಕ್ಷೆಗಳಲ್ಲಿ ಟಾಪ್ 10 ನಲ್ಲಿ ಬಹು ಸ್ಥಾನಗಳನ್ನು ಗಳಿಸಿದ್ದಾರೆ, ಮತ್ತು ಪ್ರತಿ ವರ್ಷ AIIMS, IITs, NITs ಸೇರಿದಂತೆ ದೇಶಾದ್ಯಂತದ ಪ್ರಧಾನ ಸಂಸ್ಥೆಗಳಿಗೆ ನೂರಾರು ವಿದ್ಯಾರ್ಥಿಗಳ ಯಶಸ್ವಿ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
ಪೋಷಕರಿಗಾಗಿ ವಿಶೇಷ ಮಾರ್ಗದರ್ಶನ:
ಪೋಷಕರಿಗೆ ಸಮಗ್ರ ಮಾಹಿತಿ ಮತ್ತು ಬೆಂಬಲವನ್ನು ಒದಗಿಸುವ ಸಲುವಾಗಿ, ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಅವರ ನೇತೃತ್ವದಲ್ಲಿ ವಿಶೇಷ ಮಾರ್ಗದರ್ಶನ (ಓರಿಯಂಟೇಶನ್) ಗೋಷ್ಠಿಯನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.