ಯುವಕ ಆತ್ಮಹತ್ಯೆ: ಕುಟುಂಬದ ಸರಣಿ ದುರಂತ

ಯುವಕ ಆತ್ಮಹತ್ಯೆ: ಕುಟುಂಬದ ಸರಣಿ ದುರಂತ

ಪುತ್ತೂರು: ಬೆಂಗಳೂರಿನ ಶೋರೂಮ್ ಒಂದರಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಪುತ್ತೂರಿನ ಪುರುಷರಕಟ್ಟೆಯ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಮಡ ಘಟನೆ ಶುಕ್ರವಾರ ನಡೆದಿದೆ. ಇದರೊಂದಿಗೆ ಈ ಕುಟುಂಬದ ತಂದೆ ತಾಯಿ ಹಾಗೂ ಮಗ ಮೂವರ ಆತ್ಮಹತ್ಯೆ ಸರಣಿ ದುರಂತ ನಡೆದಿದೆ. 

ಪುರುಷರಕಟ್ಟೆ ನಿವಾಸಿ ದಿ.ಪ್ರವೀಣ್ ಜೋಗಿ ಅವರ ಪುತ್ರ ಪ್ರತೀಕ್ (23) ಇದೀಗ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಹಿಂದೆ ಆತನ ತಂದೆ ಪ್ರವೀಣ್ ಜೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಆತನ ತಾಯಿ ಕಾವ್ಯ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನಾ ವಿವರ: 

ಬೆಂಗಳೂರಿನಿಂದ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಪ್ರತೀಕ್ ಮೊಬೈಲ್ ನೋಡುತ್ತಾ ಇದ್ದವರು ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಚಿಕ್ಕಪ್ಪ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಸಹೋದರಿಯನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article