ಕೋಟೇಶ್ವರ ಎಸ್ಎಲ್ಆರ್ಎಂ ಘಟಕಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ
Sunday, December 21, 2025
ಕುಂದಾಪುರ: ಕೋಟೇಶ್ವರ ಪಂಚಾಯತ್ಗೆ ಸೇರಿರುವ ಎಸ್ಎಲ್ಆರ್ಎಂ ಒಣ ತ್ಯಾಜ್ಯ ಘಟಕಕ್ಕೆ ಭಾನುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಹಾನಿಯಾದ ಘಟನೆ ನಡೆದಿದೆ.
ಕೋಟೇಶ್ವರ ಪೇಟೆಯಲ್ಲಿ ಕಟ್ಟಡಗಳು ನಿಬಿಡವಾಗಿರುವ ಪ್ರದೇಶದಲ್ಲೇ ಪಂಚಾಯತ್ ಕಚೇರಿಯೂ ಇದೆ. ಪಂಚಾಯತ್ ಕೆಳಭಾಗದಲ್ಲಿ ವಾಣಿಜ್ಯ ಕಟ್ಟಡ ಇದ್ದು ಮೇಲ್ಭಾಗದಲ್ಲಿ ತ್ಯಾಜ್ಯ ಒಣ ಘಟಕ ನಿರ್ಮಾಣ ಮಾಡಿದ್ದು, ಅಲ್ಲಿ ಶೇಖರಣೆ ಮಾಡಿ ಇಟ್ಟಿದ್ದ ಒಣ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗಲಿ ಒಣ ತ್ಯಾಜ್ಯಗಳು, ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ವಾಣಿಜ್ಯ ಸಂಕೀರ್ಣದ ಕಟ್ಟಡ ಮಹಡಿಗೆ ಹಾನಿಯಾಗುವ ಸಂಭವ ಇದ್ದು ತಕ್ಷಣ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಜಾನೆ ಹೊಗೆ ಕಾಣಿಸಿಕೊಂಡೊಡನೆಯೇ ಸ್ಥಳದಲ್ಲಿ ಕುತೂಹಲಿಗಳ ದಂಡೇ ನೆರೆದಿತ್ತು.