ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವುದು ಸಮಾಜ ಮತ್ತು ಸರಕಾರದ ಕತ೯ವ್ಯ

ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವುದು ಸಮಾಜ ಮತ್ತು ಸರಕಾರದ ಕತ೯ವ್ಯ


ಮೂಡುಬಿದಿರೆ: ಇಂದಿನ ದಿನಗಳಲ್ಲಿ ವಿಶೇಷ ಚೇತನ ಮಕ್ಕಳು ಶಿಕ್ಷಣ, ಕ್ರೀಡೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರ ಅಂತರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಅವರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ಒದಗಿಸುವುದು ಸರಕಾರ ಮತ್ತು ಸಮಾಜದ ಕತ೯ವ್ಯವಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಹೇಳಿದರು.


ಅವರು ಪುರಸಭೆ ವ್ಯಾಪ್ತಿಯ ಪ್ರಾಂತ್ಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಹಾಗೂ ಸಮನ್ವಯ ಶಿಕ್ಷಣ ಚಟುವಟಿಕೆಯಡಿಯಲ್ಲಿ ‘ಪರಿಸರ ನಿರ್ಮಾಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ವಿಶೇಷ ಚೇತನರಿಗಾಗಿ ಸರಕಾರವು ಶೇ.5 ರಷ್ಟು ಅನುದಾನವನ್ನು ಕಾಯ್ದಿರಿಸಿದ್ದು, ಅವರ ಶಿಕ್ಷಣ ಆರೋಗ್ಯದ ಅಗತ್ಯತೆಗೆ ಸಹಕಾರವನ್ನು ನೀಡುವ ಮೂಲಕ ಸಮಾಜದ ಎಲ್ಲರ ಜತೆ ಒಂದಾಗಿ ಕೂಡಿ ಬದುಕುವಂತೆ ಮಾಡುವುದು ನಮ್ಮೆಲ್ಲರ ಕತ೯ವ್ಯವಾಗಿದೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್. ಅಧ್ಯಕ್ಷತೆ ವಹಿಸಿದ್ದರು.

ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಪರಿಸರ ನಿಮಾ೯ಣ ಕಾಯ೯ಕ್ರಮದ ಬಗ್ಗೆ ಮಾತನಾಡಿದರು.

ಸನ್ಮಾನ: ವಿಶೇಷ ಚೇತನ ಸಾಧಕ ವಿದ್ಯಾಥಿ೯ಗಳಾದ ಎಕ್ಸಲೆಂಟ್‌ನ ಯಶ್ವಿತ್ ಮತ್ತು ಆಳ್ವಾಸ್‌ನ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.

ನಗರ ಪುನವ೯ಸತಿ ಕಾಯ೯ಕತೆ೯ ಸವಿತಾ, ಗ್ರಾಮೀಣ ಪುನವ೯ಸತಿ ಕಾಯ೯ಕತೆ೯ಯರಾದ ಪ್ರಿಯಾಂಕ, ವನಿತಾ, ಆಕಾಶ್ ಆಚಾರ್ಯ, ಸತೀಶ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಆರೋಗ್ಯ ನಿರೀಕ್ಷಕ ಖಾದರ್ ಎನ್., ಪ್ರಾಂತ್ಯ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ, ಅಲಂಗಾರು ಲಯನ್ಸ್ ಕ್ಲಬ್‌ನ ಕಾಯ೯ದಶಿ೯ ರಿಚಾಡ್೯ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯಾ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಾಂತ್ಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಚಂದ್ರ ಅಂಬೂರಿ ಕಾಯ೯ಕ್ರಮ ನಿರೂಪಿಸರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಫ್ಲೇವಿ ಡಿ’ಸೋಜಾ ವಂದಿಸಿದರು.

ಸಭಾ ಕಾಯ೯ಕ್ರಮದ ನಂತರ ವಿಶೇಷ ಚೇತನರ ಪೋಷಕರಿಗೆ ಮತ್ತು ಅಂಗನವಾಡಿ ಕಾಯ೯ಕತೆ೯ಯರಿಗೆ ಜಾಗೃತಿ ಮತ್ತು ಅರಿವು ಕಾಯಾ೯ಗಾರ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article