ಕರಾವಳಿ ಉತ್ಸವದಲ್ಲಿ ಕೈಲಾಸ್ ಕೇರ್ರಿಂದ ಸಂಗೀತ ಸಂಜೆ ಕಾರ್ಯಕ್ರಮ
Sunday, January 4, 2026
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಖ್ಯಾತ ಗಾಯಕರಾದ ಕೈಲಾಸ್ ಕೇರ್ ಅವರಿಂದ ತಣ್ಣೀರು ಬಾವಿ ಬೀಚ್ನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನೆರೆದ ಜನತ್ಸೋಮವನ್ನು ರಂಜಿಸಿದರು.
ಈ ಸಂದರ್ಭ ಸ್ಥಳೀಯ ಕಲಾವಿದರು ತಮ್ಮ ಹಾಡುಗಳ ಮೂಲಕ ಜನಮನವನ್ನು ರಂಜಿಸಿದರು. ಈ ಸಂದರ್ಭ ಮಾತನಾಡಿದ ಅವರು ಮೂಡಬಿದಿರೆಯ ಆಳ್ವಾಸ್ನಲ್ಲಿ ಈ ಹಿಂದೆ ನೀಡಿದ ಕಾರ್ಯಕ್ರಮ ಹೊರತು ಪಡಿಸಿ ಈ ಕಾರ್ಯಕ್ರಮ ಮಂಗಳೂರಿನ ನನ್ನ ಪ್ರಥಮ ಕಾರ್ಯಕ್ರಮ ಈ ಬೃಹತ್ ಜನಸ್ತೋನ ನೋಡಿ ತುಂಬಾ ಖುಷಿ ನೀಡಿದೆ ಎಂದು ಕೈಲಾಸ್ ಕೇರ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ರಾಜು ಕೆ., ಕಲ್ಟ್ ಚಲನಚಿತ್ರದ ನಟ ಝಾಹಿದ್ ಖಾನ್, ನಟಿ ಮಲೈಕಾ ಉಪಸ್ಥಿತರಿದ್ದರು.