ಮಾಜಿ ಸಚಿವ ದೇಶಪಾಂಡೆ ಆನೆಗುಡ್ಡೆಗೆ ಭೇಟಿ
Wednesday, February 25, 2026
ಕುಂದಾಪುರ: ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಬುಧವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯರು ಅವರನ್ನು ಬರಮಾಡಿಕೊಂಡು ಗೌರವ ಪ್ರಸಾದವನ್ನು ನೀಡಿದರು. ಪರ್ಯಾಯ ಅರ್ಚಕ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು ಹಾಗೂ ದೇವಸ್ಥಾನದ ಪ್ರಬಂಧಕ ನಟೇಶ್ ಕಾರಂತ ಉಪಸ್ಥಿತರಿದ್ದರು.