ಬಡಗಮಿಜಾರು: ಪರಿಹಾರಧನ ಪೂರ್ಣ ಪಾವತಿಸದೆ ಕಾಮಗಾರಿ: ರೈತರಿಂದ ತೀವ್ರ ವಿರೋಧ, ಪ್ರತಿಭಟನೆ

ಬಡಗಮಿಜಾರು: ಪರಿಹಾರಧನ ಪೂರ್ಣ ಪಾವತಿಸದೆ ಕಾಮಗಾರಿ: ರೈತರಿಂದ ತೀವ್ರ ವಿರೋಧ, ಪ್ರತಿಭಟನೆ


ಮೂಡುಬಿದಿರೆ: ಬಡಗಮಿಜಾರು ಗ್ರಾಮದ ಮಂಜನಬೈಲು ಪ್ರದೇಶದ ರೈತರ ಜಮೀನಿನಲ್ಲಿ 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಸ್ಟೆರ್‌ಲೈಟ್ ಕಂಪೆನಿ ಸಂಪೂರ್ಣ ಪರಿಹಾರಧನ ಪಾವತಿಸದೆ ಪೊಲೀಸ್ ಬಲದ ಸಹಾಯದಿಂದ ಬುಧವಾರ ಹಾಗೂ ಗುರುವಾರ ಕಾಮಗಾರಿ ನಡೆಸಿರುವುದು ತೀವ್ರ ವಿರೋಧಕ್ಕೆ ವ್ಯಕ್ತ ಪಡಿಸಿದ್ದಾರೆ. 

ಮಂಜನಬೈಲಿನ ಸಂಜೀವ್ ಗೌಡ ಅವರ ತೋಟದಲ್ಲಿ ಕಾಮಗಾರಿ ನಡೆಸಿದ ವೇಳೆ ಸಂಜೀವ್ ಗೌಡ ಹಾಗೂ ಸ್ಥಳೀಯ ರೈತರು ಸ್ಥಳಕ್ಕೆ ಆಗಮಿಸಿ ಕಂಪೆನಿಯ ಕ್ರಮವನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದರು. 


ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರೈತಪರ ಹೋರಾಟಗಾರ ಅಲ್ಫೋನ್ಸ್ ಡಿಸೋಜ, “ಮೂರು ತಿಂಗಳ ಹಿಂದೆ ಕಿನ್ನಿಗೋಳಿಯಲ್ಲಿ ನಡೆದ ಸಭೆಯಲ್ಲಿ ಎ.ಸಿ., ಶಾಸಕರು, ವಕೀಲರು, ಕಿಸಾನ್ ಸಂಘದ ಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಸ್ಟೆರ್‌ಲೈಟ್ ಕಂಪೆನಿಯ ಅಧಿಕಾರಿಗಳು ಹಾಗೂ ಸಂತ್ರಸ್ತ ರೈತರು ಭಾಗವಹಿಸಿದ್ದರು. ಆ ಸಭೆಯಲ್ಲಿ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರಧನ ಪಾವತಿಸಬೇಕು ಹಾಗೂ ಕಾಮಗಾರಿ ವೇಳೆ ಪೊಲೀಸ್ ಬಲ ಬಳಸಬಾರದು ಎಂದು ಕಂಪೆನಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು. ಆದರೂ ಕಂಪೆನಿ ಈ ಸೂಚನೆಗಳನ್ನು ಕಡೆಗಣಿಸಿ, ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ” ಎಂದು ಆರೋಪಿಸಿದರು.

ಸ್ಥಳೀಯ ರೈತರು, “ಪರಿಹಾರಧನದ ವಿಚಾರ ಬಗೆಹರಿಯುವವರೆಗೆ ಕಾಮಗಾರಿ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಬುಧವಾರದೊಳಗೆ ಮೊತ್ತ ಪಾವತಿ: 

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ‌ ಸಂದೇಶ್ ಪಿ.ಜಿ ಅವರು, ಕಂಪೆನಿಯವರಲ್ಲಿ ಯಾವಾಗ ಉಳಿದ ಮೊತ್ತವನ್ನು ಸಂತ್ರಸ್ತರಿಗೆ ನೀಡುತ್ತೀರಿ ? ಎಂದು ಅಧಿಕಾರಿಯವರಲ್ಲಿ ಕೇಳಿದ್ದು, ಮುಂದಿನ ಬುಧವಾರದೊಳಗೆ ಪಾವತಿ ಮಾಡುತ್ತೇನೆ. ಈ ಕುರಿತು ಲಿಖಿತವಾಗಿಯೂ ರೈತರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article