ಸಿಎ ಪರೀಕ್ಷೆಯಲ್ಲಿ ತೇರ್ಗಡೆ
Friday, March 6, 2026
ಪುತ್ತೂರು: ಜನವರಿ 2026 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಅನನ್ಯ ಬೈಪಡಿತ್ತಾಯ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ನಿವಾಸಿಯಾಗಿರುವ ನಾರಾಯಣ ಬೈಪಡಿತ್ತಾಯ ಹಾಗೂ ದಿ.ಗಂಗಾರತ್ನ ಎನ್. ಬೈಪಾಡಿತ್ತಾಯ ದಂಪತಿಗಳ ಪುತ್ರಿಯಾಗಿರುವ ಅನನ್ಯ ಬೈಪಡಿತ್ತಾಯ ಅವರು ಪ್ರಸ್ತುತ ಪುತ್ತೂರಿನ ದಾಮೋದರ್ & ಕಂಪೆನಿಯಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪಡೆಯುತ್ತಿದ್ದಾರೆ.