ಕೋಳಿ ಬಾಳಿನಿಂದ ಇರಿತ
Monday, April 13, 2026
ಬಂಟ್ವಾಳ: ಕುಡಿಯುವ ನೀರಿನ ವಿಚಾರದಲ್ಲಿ ನೆರೆಮನೆಯರಿಬ್ಬರ ನಡುವಿನ ಜಗಳ ಕೋಳಿ ಬಾಳಿನಿಂದ ಇರಿತದಲ್ಲಿ ಪರ್ಯಾವಸನಗೊಂಡ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ತಲಂಬಿಲದಲ್ಲಿ ನಡೆದಿದೆ.
ಅಮ್ಟಾಡಿ ಗ್ರಾಮದ ತಲೆಂಬಿಲ ನಿವಾಸಿ ದಯಾನಂದ ಮಡಿವಾಳ ಎಂಬವರ ಮಧ್ಯೆ ಕುಡಿಯುವ ನೀರಿಗೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ದಯಾನಂದ ಅವರಿಗೆ
ಇವರ ನೆರೆಮನೆಯ ನಿವಾಸಿ ವಸಂತ ಶೆಟ್ಟಿ ಎಂಬವರು ಕೋಳಿಯ ಬಾಳಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.